ಭಟ್ಕಳದ ಗುಳ್ಮಿ ಬೆಳಲಖಂಡದಲ್ಲಿ ಅಕ್ರಮ ಗೋ ಸಾಗಾಣಿಕೆ – ಇಬ್ಬರ ಬಂಧನ

ಭಟ್ಕಳ: ಅಕ್ರಮವಾಗಿ ಬುಲೆರೋ ವಾಹನದಲ್ಲಿ ಜಾನುವಾರು ಸಾಗಾಟ ಮಾಡುವ ವೇಳೆ ಗುಳ್ಮಿ ಬೆಳಲಖಂಡದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ನಡೆದಿದೆ.

ಆರೋಪಿಗಳನ್ನು ಇರ್ಫಾನ್ ಅಬ್ದುಲ್ ಸತ್ತಾರ್ ಹಾಗೂ ಅಸ್ಲಾಂ ಮುಸ್ತಾಫ್ ಸೈಯ್ಯದ್ ಎಂದು ತಿಳಿದು ಬಂದಿದೆ. ಇವರು ಬಲೆರೋ ವಾಹನದ ನಂ: ಕೆ.ಎ-15/ಎ-7019 ವಾಹನದಲ್ಲಿ. ಸುಮಾರು 8 ಸಾವಿರ ಮೌಲ್ಯದ ಬ 2 ದನ ಹಾಗೂ 2 ಕರುಗಳಿಗೆ ನೀರು, ಹುಲ್ಲು ಕೊಡದೆ ಹಿಂಸಾತ್ಮಕವಾಗಿ ಕಟ್ಟಕೊಂಡು ವಧೆ ಮಾಡುವ ಉದ್ದೇಶದಿಂದ  ಪರವಾನಿಗೆ ಪಡೆಯದೇ ಸಾಗಾಟ ಮಾಡುತ್ತಿರುವ ವೇಳೆ ಪೊಲೀಸರ ಕೈಗೆ ಸಿಕ್ಕಿದ್ದು ಇಬ್ಬರು ಆರೋಪಿಗಳನ್ನು ಬಂಧಿಸಿ ಜಾನುವಾರು ವಶಕ್ಕೆ ಪಡೆದುಕೊಳ್ಳಲಾಗಿದೆ.

ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ