ಹೊನ್ನಾವರದ ಉಪ್ಪೋಣಿಯಲ್ಲಿ ವಿಜಯದಶಮಿ ಸಂಭ್ರಮ – ಹೊಸ್ಕೇರಿಯ ವಿವಿಧ ದೇಗುಲಗಳಲ್ಲಿ ದಸರಾ ನಿಮಿತ್ತ ಅದ್ದೂರಿಯಾಗಿ ನಡೆದ ಶ್ರೀ ದೇವಿ ಪಾರಾಯಣ


ಹೊನ್ನಾವರ
ತಾಲೂಕಿನಾದ್ಯಂತ ವಿಜಯದಶಮಿ ಹಬ್ಬವನ್ನು ಸಂಭ್ರಮ ಸಡಗರದುಂದ ಆಚರಿಸಲಾಯ್ತು. ತಾಲೂಕಿನ ಶ್ರೀ ಚೌಡೇಶ್ವರಿ, ಮಾರುತಿ, ಶನೇಶ್ವರ, ಭೂತೇಶ್ವರ ದೇವಸ್ಥಾನಗಳಲ್ಲಿ ದಸರಾ ನಿಮಿತ್ತ ಹಮ್ಮಿಕೊಂಡಿದ್ದ ವಿಶೇಷ ಪೂಜಾ ಕೈಂಕರ್ಯ ಹಾಗೂ ಶ್ರೀ ದೇವಿ ಪಾರಾಯಣಾ ಅದ್ದೂರಿಯಾಗಿ ನಡೆಯಿತು…

ಪೂಜೆ ವೇಳೆ ನೂರಾರು ಭಕ್ತರು ಆಗಮಿಸಿ ದೇವರಿಗೆ ಆರತಿ, ಅರ್ಚನೆ, ಹಣ್ಣು-ಕಾಯಿ ಸಮರ್ಪಿಸಿದ್ರು. ಮಹಿಳೆಯರು ಉಡಿ ಸೇವೆ ಸಲ್ಲಿಸಿದ್ರು. ನಂತರ ಅರಿಶಿಣ ಕುಂಕುಮ ಕಾರ್ಯಕ್ರಮ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.

ಸರಳಗಿಯ ಶ್ರೀ ಸ್ಮಶಾನಕಾಳಿ ದೇವಸ್ಥಾನದಲ್ಲಿ ವಿಜಯದಶಮಿ ಅಂಗವಾಗಿ ವಿಶೇಷ ಪೂಜೆ ಜರುಗಿತು. ದೇವಾಲಯದ ಅರ್ಚಕ ಮಾರುತಿ. ಬಿ. ಉಪ್ಪಾರ ನವರಾತ್ರಿಯ ಕೊನೆಯ ದಿನದ ಪೂಜೆಯನ್ನು ಬಹಳ ವಿಜೃಂಭಣೆಯಿಂದ ನೆರವೇರಿಸಿದ್ರು…

ಒಟ್ಟಿನಲ್ಲಿ ಈ ಬಾರಿಯ ನವರಾತ್ರಿಯನ್ನು ತಾಲೂಕಿನಾದ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಯ್ತು. ತಾಲೂಕಿನ ಉಪ್ಪೋಣಿಯಲ್ಲಿ ವಿಜೃಂಭಣೆಯ ಹಾಗೂ ಶ್ರದ್ಧಾಭಕ್ತಿಯ ವಿಶೇಷ ಪೂಜೆ ಯಶಸ್ವಿಯಾಗಿ ನಡೆಯಿತು…

ನಾಗರಾಜ್‌ ನಾಯ್ಕ, ನುಡಿಸಿರಿ ನ್ಯೂಸ್‌, ಹೊನ್ನಾವರ