ಮುರುಡೇಶ್ವರ ಪ್ರವಾಸಕ್ಕೆ ಬಂದ ಇಬ್ಬರು ಯುವಕರು ಸಮುದ್ರದಲ್ಲಿ ಮುಳುಗುತ್ತಿದ್ದ ವೇಳೆ ರಕ್ಷಣೆ ಮಾಡಿದ ಲೈಫ್ ಗಾರ್ಡ್ ಸಿಬ್ಬಂದಿಗಳು

ಭಟ್ಕಳ: ಮುರುಡೇಶ್ವರ ಪ್ರವಾಸಕ್ಕೆ ಬಂದ ಎರಡು ಪ್ರತ್ಯೇಕ ತಂಡಗಳ ಇಬ್ಬರು ಯುವಕರು ಸಮುದ್ರದಲ್ಲಿ ಮುಳುಗುತ್ತಿದ್ದ ವೇಳೆ ಲೈಫ್ ಗಾರ್ಡ್ ಸಿಬ್ಬಂದಿಗಳು ಇಬ್ಬರನ್ನು ರಕ್ಷಣೆ ಮಾಡಿದ್ದು ಸದ್ಯ ಮುರುಡೇಶ್ವರ ಆರ್.ಎನ್.ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ರಕ್ಷಣೆಯಾವರಲ್ಲಿ ಓರ್ವ  ಮನೋಜ(24) ಹಾಸನ ಜಿಲ್ಲೆಯ ಹನುಮಂತಪುರದರರು ಎಂದು ತಿಳಿದು ಬಂದಿದೆ. ಈತ ತನ್ನ 7 ಜನ ಕುಟುಂಬ ಸ್ನೇಹಿತರೊಂದಿಗೆ  ಮುರುಡೇಶ್ವ ಪ್ರವಾಸಕ್ಕೆ ಬಂದಿದ್ದು. ದೇವರ ದರ್ಶನ ಬಳಿಕ ಸಮುದ್ರದಲ್ಲಿ ಈಜಲು ತೆರಳಿದ ವೇಳೆ ಅಲೆಯ ರಭಸಕ್ಕೆ ನೀರಿನಲ್ಲಿ ಮುಳುಗುತ್ತಿರುವುದನ್ನು ಗಮನಿಸಿದ ಲೈಫ್ ಗಾರ್ಡ್ ಸಿಬ್ಬಂದಿಗಳು ತಕ್ಷಣ ಬೋಟ್ ಮೂಲಕ ಯುವಕರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ರಕ್ಷಣೆಯಾದ ಇನ್ನೋರ್ವ ಯುವಕ ದಿಲೀಪ್ ಗೌಡ ಮಂಡ್ಯ ಮೂಲದವರೆಂದು ತಿಳಿದು ಬಂದಿದೆ. ಈತನು ಸಮುದ್ರಕ್ಕೆ ಈಜಲು ತೆರಳಿದ ವೇಳೆ ನೀರಿನಲ್ಲಿ ಮುಳುಗುತ್ತಿದ್ದ ವೇಳೆ ಲೈಫ್ ಗಾರ್ಡ್ ಸಿಬ್ಬಂದಿಗಳು ರಕ್ಷಣೆ ಮಾಡಿದ್ದಾರೆ.

ಸದ್ಯ ಇಬ್ಬರು ಯುವಕರು ಮುರುಡೇಶ್ವರ ಆರ್.ಎನ್.ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ