ದಾಂಡೇಲಿಯಲ್ಲಿ ಏಳನೇ ದಿನಕ್ಕೆ ಮುಂದುವರಿದ ಶ್ರೀ.ದುರ್ಗಾಮಾತಾ ದೌಡ್

ದಾಂಡೇಲಿ : ಶ್ರೀ. ಶಿವ ಪ್ರತಿಷ್ಠಾನ ಹಿಂದುಸ್ಥಾನ ಇದರ ಆಶ್ರಯದಡಿ ನಡೆಯುತ್ತಿರುವ ಶ್ರೀ ದುರ್ಗಾಮಾತಾ ದೌಡ್ ಕಾರ್ಯಕ್ರಮವು ಶನಿವಾರ ಏಳನೇ ದಿನಕ್ಕೆ ಮುಂದುವರಿದಿದೆ.

ಬರ್ಚಿ ರಸ್ತೆಯ ಅಂಚೆ ಕಚೇರಿ ಹತ್ತಿರದಲ್ಲಿರುವ ಮಾರುತಿ ಮಂದಿರದಿಂದ ಆರಂಭಗೊಂಡ ಶ್ರೀ ದುರ್ಗಾಮಾತಾ ದೌಡ್ ಮೆರವಣಿಗೆಯು ಬರ್ಚಿ ರಸ್ತೆ, ಬಂಗೂರನಗರ, ಟಿ.ಆರ್.ಟಿ, ಎಸ್.ಆರ್.ಟಿ ಸೇರಿದಂತೆ ಕಾಗದ ಕಾರ್ಖಾನೆಯ ವಸತಿ ಗೃಹ ಪ್ರದೇಶ ಸಂಚರಿಸಿ ಕೊನೆಯಲ್ಲಿ ಚೌದರಿ ಗೇಟ್ ಹತ್ತಿರದಲ್ಲಿರುವ ಹನುಮಾನ್ ಮಂದಿರದಲ್ಲಿ ಸಂಪನ್ನಗೊಂಡಿತು.

ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಭಗವದ್ಭಕ್ತರು ಶ್ರೀ.ದುರ್ಗಾಮಾತಾ ದೌಡ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.