ಹಳಿಯಾಳದಲ್ಲಿ ಗೂಡಅಂಗಡಿಗಳ ತೆರವು ಕಾರ್ಯಾಚರಣೆ ಯಶಸ್ವಿ

ಹಳಿಯಾಳ:- ಹಳಿಯಾಳದಲ್ಲಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಮತ್ತು ಸಹಾಯಕ ಆಯುಕ್ತರಾದ ಜಯಲಕ್ಷ್ಮೀ‌ ರಾಯಕೋಡ, ತಹಶೀಲ್ದಾರ್ ಜಿ.ಕೆ.ರತ್ನಾಕರ್ ಅವರ ಮಾರ್ಗದರ್ಶನದಡಿ ಪುರಸಭೆಯ ಮುಖ್ಯಾಧಿಕಾರಿ ಅಶೋಕ ಸಾಳೆನ್ನವರ ನೇತೃತ್ವದಲ್ಲಿ ನಡೆದ ಅತಿಕ್ರಮಿತ ಗೂಡಂಗಡಿಗಳ ತೆರವು ಕಾರ್ಯಚರಣೆ ಯಶಸ್ವಿಯಾಗಿ ನಡೆಯಿತು..

ಸಿಪಿಐ ಸುರೇಶ್ ಶಿಂಧೆ ಮತ್ತು ಪಿಎಸ್ಐ ವಿನೋದ್.ಎಸ್.ಕೆ ನೇತೃತ್ವದ ಪೊಲೀಸರ ಸಂಪೂರ್ಣ ಸಹಕಾರದಲ್ಲಿ ಪಟ್ಟಣದ ವನಶ್ರೀ ವೃತ್ತ ಹಾಗೂ ಬಸ್ ನಿಲ್ದಾಣ ಹತ್ತಿರದ ರಸ್ತೆಬದಿ ಅತಿಕ್ರಮಿತ ಗೂಡಂಗಡಿಗಳನ್ನು ತೆರವುಗೊಳಿಸಲಾಯ್ತು. ತೆರವಿಗೂ ಮುನ್ನ ಅತಿಕ್ರಮಿತ ಗೂಡಂಗಡಿದಾರರ ಮನವೊಲಿಸಿ, ಪರ್ಯಾಯ ಸ್ಥಳ‌ ನಿಗಧಿಪಡಿಸುವ ಭರವಸೆ ನೀಡಿ ಅವರೆಲ್ಲರ ವಿಶ್ವಾಸವನ್ನು ಪಡೆದು ತೆರವು ಕಾರ್ಯಾಚರಣೆ ನಡೆಸಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ..

ಸಂದೇಶ್‌ ಜೈನ್‌ ನುಡಿಸಿರಿ ನ್ಯೂಸ್‌, ಹಳಿಯಾಳ