ದಾಂಡೇಲಿ ನಗರ ಸಭೆ ಆವರಣದಲ್ಲಿ ನಿರ್ಮಾಣವಾಗ್ತಿರೋ ಅಂಬೇಡ್ಕರ್‌ ಪ್ರತಿಮೆ: ಗುಣಮಟ್ಟದ ಕಾಮಗಾರಿ ನಡೆಸುವಂತೆ ಪೌರಾಯುಕ್ತರಿಗೆ ಮನವಿ

ದಾಂಡೇಲಿ:- ದಾಂಡೇಲಿಯ ನಗರ ಸಭೆ ಆವರಣದಲ್ಲಿ ನಿರ್ಮಾಣವಾಗುತ್ತಿರೋ ಅಂಬೇಡ್ಕರ್‌ ಮೂರ್ತಿಯ ಸ್ಥಾಪನೆಯ ಕಾಮಗಾರಿಯನ್ನು ಗುಣಮಟ್ಟದ ರೀತಿಯಲ್ಲಿ ನಡೆಸುವಂತೆ ಅಂಬೇಡ್ಕರ್ ಮೂರ್ತಿ ಪ್ರತಿಷ್ಟಾಪನಾ ಸಮಿತಿಯಿಂದ ನಗರಸಭೆ ಪೌರಾಯುಕ್ತ ಆರ್.ಎಸ್.ಪವಾರ್‌ ಹಾಗೂ ಅಭಿಯಂತರರಾದ ಕೆ.ಎಸ್.ಕಮ್ಮಾರ್ ಅವರಿಗೆ ಮನವಿ ಸಲ್ಲಿಸಲಾಯ್ತು.

ಮೂರ್ತಿ ಸ್ಥಾಪನಾ ಕಾಮಗಾರಿಯನ್ನು ಗುಣಮಟ್ಟ ಹಾಗೂ ಶಿಘ್ರವಾಗಿ ಮುಗಿಸುವಂತೆ ಮನವಿ ಸಲ್ಲಿಸಿದ್ರು. ಈ ವೇಳೆ ಅಂಬೇಡ್ಕರ ಮೂರ್ತಿ ಪ್ರತಿಷ್ಟಾಪನಾ ಸಮಿತಿಯ ಉಪಾಧ್ಯಕ್ಷ ಚಂದ್ರಕಾಂತ ನಡಿಗೇರ ನೇತೃತ್ವದ ನಿಯೋಗವು ವಿವಿಧ ಸಲಹೆ ಸೂಚನೆಗಳನ್ನು ನೀಡಿದ್ರು..

ಸಂದೇಶ್‌ ಜೈನ್‌ ನುಡಿಸಿರಿ ನ್ಯೂಸ್‌, ದಾಂಡೇಲಿ