ತಾಲೂಕು ಆಡಳಿತದಿಂದ ತಹಶೀಲ್ದಾರ ಕಛೇರಿಯಲ್ಲಿ ಮಹಾತ್ಮಾ ಗಾಂಧಿಜಿ ಹಾಗೂ ಲಾಲಬಹದ್ದೂರ ಶಾಸ್ತ್ರಿ ರವರ ಜನ್ಮದಿನವನ್ನುಆಚರಿಸಲಾಯಿತು

ಸಿದ್ದಾಪುರ : ತಾಲೂಕು ಆಡಳಿತದಿಂದ ತಹಶೀಲ್ದಾರ ಕಛೇರಿಯಲ್ಲಿ ಮಹಾತ್ಮಾ ಗಾಂಧಿಜಿ ಹಾಗೂ ಲಾಲಬಹದ್ದೂರ ಶಾಸ್ತ್ರಿ ರವರ ಜನ್ಮದಿನವನ್ನು ತಹಸೀಲ್ದಾರ್ ಕಚೇರಿಯಲ್ಲಿ ಆಚರಿಸಲಾಯಿತು ತಹಶೀಲ್ದಾರ ಎಂ ಆರ್ ಕುಲಕರ್ಣಿ ಯವರು ಗಾಂಧೀಜಿ, ಶಾಸ್ತ್ರೀ ಭಾವಚಿತ್ರ ಕ್ಕೆ ಪುಷ್ಪ ಅರ್ಚನೆ ಮಾಡಿ ಹಿರಿಯ ಆದರ್ಶ ಕುರಿತು ತಿಳಿಸಿದರು ಈ ವೇಳೆಯಲ್ಲಿ ಶಿರಸ್ತೇದಾರರು, ಕಛೇರಿಯ ಸಿಬ್ಬಂದಿಗಳು ಹಾಜರಿದ್ದರು. ತಾಲೂಕಿನ ಶತಾಯುಷಿ ಮತದಾರರನ್ನು ತಾಲೂಕು ಆಡಳಿತದಿಂದ ಅಭಿನಂದಿಸಿ ಸನ್ಮಾನಿಸಿದರು. ಮುಗದೂರ ಗ್ರಾಮದ ಹಂಜಗಿಯ ಕನ್ನೆ ಹುಚ್ಚರಾಯ ನಾಯ್ಕ ಹಾಗೂ ವಾಜಗೋಡ ಗ್ರಾಮದ ಶೀಬಳಮನೆಯ ಮಂಜಮ್ಮ ಮಾಬ್ಲೇಶ್ವರ ಹೆಗಡೆ ಇವರುಗಳನ್ನು ಸನ್ಮಾನಿಸಲಾಯಿತು. ತಹಶೀಲ್ದಾರ ಎಂ ಆರ್ ಕುಲ್ಕರ್ಣಿ, ಇ, ಒ ದೇವರಾಜ್ ಹಿತ್ಲಕೊಪ್ಪ, ರವರು ಶತಾಯುಷಿ ಮತದಾರರ ಮನೆಗೆ ಭೇಟಿ ನೀಡಿ ಗೌರವಿಸಿದರು ಈ ಸಂದರ್ಭದಲ್ಲಿ ಹಾಜರಿದ್ದ ಗ್ರಾಮದ ಮತದಾರರಿಗೆ ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿದರು.