ಗಾಂಧಿಸ್ಮೃತಿ ಮತ್ತು ದುಶ್ಚಟಗಳ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ದಿನಕರ ಶೆಟ್ಟಿ

ಕುಮಟಾದ ರೋಟರಿ ಕ್ಲಬ್‌ ಸಭಾಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್‌ವತಿಯಿಂದ ಹಮ್ಮಿಕೊಂಡಿದ್ದ ಗಾಂಧಿಸ್ಮೃತಿ ಮತ್ತು ದುಶ್ಚಟಗಳ ಜಾಗೃತಿ ಕಾರ್ಯಕ್ರಮಕ್ಕೆ ಶಾಸಕ ದಿನಕರ ಶೆಟ್ಟಿ ಚಾಲನೆ ನೀಡಿದ್ರು

ಕುಮಟಾದ ರೋಟರಿ ಕ್ಲಬ್‌ ಸಭಾಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್‌ವತಿಯಿಂದ ಹಮ್ಮಿಕೊಂಡಿದ್ದ ಗಾಂಧಿಸ್ಮೃತಿ ಕಾರ್ಯಕ್ರಮಕ್ಕೆ ಶಾಸಕ ದಿನಕರ ಶೆಟ್ಟಿ ಚಾಲನೆ ನೀಡಿದ್ರು..ಮದ್ಯಪಾನದಿಂದ ಮನುಷ್ಯನ ಕೌಟುಂಬಿಕ ಜೀವನಮಾತ್ರ ಕೆಡುವುದಿಲ್ಲ. ಅದರಿಂದ ಸಂಪೂರ್ಣ ಸಮಾಜದ ಮೇಲೆ ಹಲವು ರೀತಿಯ ದುಷ್ಪರಿಣಾಮ ಬೀರುತ್ತದೆ. ವ್ಯಸನಮುಕ್ತ ಸಮಾಜ ನಿರ್ಮಾಣದ ಪರಿಕಲ್ಪನೆಯೊಂದಿಗೆ ಸೇವೆ ಸಲ್ಲಿಸುತ್ತಿರುವ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಟ್ರಸ್ಟ್‌ಗೆ ಅಭಿನಂದನೆ ಸಲ್ಲಿಸಿದ್ರು.ಗಾಂಧೀಜಿ ಕೂಡ ಮದ್ಯಪಾನ ಮುಕ್ತ ಸಮಾಜವನ್ನು ಕಟ್ಟುವ ಕನಸನ್ನು ಕಂಡಿದ್ದರು. ಅವರ ಜನ್ಮದಿನದ ಅಂಗವಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು ಬಹಳ ಅರ್ಥಪೂರ್ಣವಾದದ್ದು ಎಂದು ದಿನಕರ ಶೆಟ್ಟಿ ಹೇಳಿದ್ರು.

ಈ ವೇಳೆ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಮಹೇಶ ನಾಯ್ಕ, ಉಪಾಧ್ಯಕ್ಷ ವಾಸುದೇವ ನಾರಾಯಣ ನಾಯಕ, ಮಾಜಿ ಅಧ್ಯಕ್ಷ ಯೋಗಾನಂದ ಗಾಂಧಿ, ಮಮತಾ ನಾಯ್ಕ, ಕಲ್ಮೇಶ ಎಂ. ಹಾಗೂ ಇತರರು ಉಪಸ್ಥಿತರಿದ್ರು..