ಗೂಡಂಗಡಿಯಲ್ಲಿ ಚಹಾ ಸೇವಿಸಿ ಸರಳತೆ ಮೆರೆದ ಹೆಬ್ಬಾರ್

ಕುಮಟಾ: ಕಾರ್ಮಿಕ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಕುಮಟಾ ಪಟ್ಟಣದ ಗಿಬ್ ವೃತ್ತದಲ್ಲಿ ಸಣ್ಣ ಚಹಾ ಅಂಗಡಿಯಲ್ಲಿ ಬೆಂಬಲಿಗರೊಂದಿಗೆ ಚಹಾ ಸೇವಿಸಿ, ತಮ್ಮ ಸರಳತೆ ಮೆರೆದರು.

ಭಟ್ಕಳಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸುವ ಹಿನ್ನೆಲೆ ಶಿವರಾಮ ಹೆಬ್ಬಾರ ಕುಮಟಾಕ್ಕೆ ಭೇಟಿ ನೀಡಿದ್ದರು. ಈ ವೇಳೆ ಸಣ್ಣ ಅಂಗಡಿಯಲ್ಲಿ ಟೀ ಸೇವಿಸಿ, ಮತ್ತೊಮ್ಮೆ ತಮ್ಮ ಸರಳತೆಯನ್ನು ತೋರ್ಪಡಿಸಿದರು.
ಈ ವೇಳೆ ಕೆ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಗಜಾನ ನ ಪೈ, ಪ್ರಮುಖರಾದ ವಿನೋದ ಪ್ರಭು, ಕುಮಾರ ಮಾರ್ಕಾಂಡೆ, ಆರ್.ಜಿ.ಗುನಗಾ ಸೇರಿದಂತೆ ಮತ್ತಿತರರು ಇದ್ದರು.