ರಾಷ್ಟ್ರೀಯ ಈಡಿಗ ನಾಮಧಾರಿ ಮಹಾಮಂಡಳಿ ವತಿಯಿಂದ ಪೂರ್ವ ಭಾವಿ ಸಭೆ

ಸಿದ್ದಾಪುರ : ರಾಷ್ಟ್ರೀಯ ಈಡಿಗ ನಾಮಧಾರಿ ಮಹಾಮಂಡಳಿ ವತಿಯಿಂದ ಶಿರಸಿ ನಗರದಲ್ಲಿ ಆಗಸ್ಟ್ 13 ರಂದು ನಡೆಯಲಿರುವ ಚಿಂತನೆ ಸಭೆ ಕುರಿತು ಪೂರ್ವ ಭಾವಿ ಸಭೆ ನಡೆಯಿತು.
ಜಿಲ್ಲಾಧ್ಯಕ್ಷ ವೀರಭದ್ರ ನಾಯ್ಕ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ಶಿರಸಿಯ ಮಾರಿಕಾಂಬಾ ಕಲ್ಯಾಣ ಮಂಟಪದಲ್ಲಿ ಚಿಂತನೆ ಸಭೆ ನಡೆಸಲು ತೀರ್ಮಾನಿಸಲಾಯಿತು.
ಜಿಲ್ಲಾ ಗೌರವಅಧ್ಯಕ್ಷ ನಾಗೇಶ್ ನಾಯ್ಕ್ ಕಾಗಲ್ ಕಾರ್ಯಕ್ರಮದ ಪೂರ್ವ ತಯಾರಿ ಕುರಿತು ಸಭೆಯಲ್ಲಿ ಹಾಜರಿದ್ದ ಸಮಾಜದ ಮುಖಂಡ ರೊಂದಿಗೆ ಚರ್ಚಿಸಿ ವಿವಿಧ ಸಮಿತಿಗಳಿಗೆ ಜವಾಬ್ದಾರಿ ವಹಿಸಿದರು.
ಕಾರ್ಯಕ್ರಮದ ಉದ್ಘಾಟಕರಾಗಿ ಸಚಿವ ಮಧುಬಂಗಾರಪ್ಪ, ಅತಿಥಿಗಳಾಗಿ ಶಾಸಕ ಭೀಮಣ್ಣ ನಾಯ್ಕ್, ಬೇಳೂರು ಗೋಪಾಲ ಕೃಷ್ಣ, ಮುಖಂಡ ಸೂರಜ್ ನಾಯ್ಕ್ ಕುಮಟಾ ಮತ್ತಿತರರನ್ನು ಆಹ್ವಾನಿಸಲು ತೀರ್ಮಾನಿಸಲಾಯಿತು.