ಸಚಿವ ಮಂಕಾಳ್ ವೈದ್ಯರಿಂದ ಸಾರ್ವಜನಿಕರ ಅಹವಾಲು ಸ್ವೀಕಾರ

ಭಟ್ಕಳದ ನೂತನ ಕಾರ್ಯಾಲಯದಲ್ಲಿ ಸಚಿವ ಮಂಕಾಳ್ ವೈದ್ಯ ಸಾರ್ವಜನಿಕರ ಅಹವಾಲು ಸ್ವೀಕಾರ ಕಾರ್ಯಕ್ರಮ ನಡೆಸಿದ್ರು.
ಸಚಿವರ ನೂತನ ಕಾರ್ಯಾಲಯ ಉದ್ಘಾಟನೆಯಾದ ಬಳಿಕ ಇದೆ ಮೊದಲ ಬಾರಿಗೆ ಭಟ್ಕಳದ ನೂತನ ಕಾರ್ಯಾಲಯದಲ್ಲಿ ಸಚಿವ ಮಂಕಾಳ್ ವೈದ್ಯ ಸಾರ್ವಜನಿಕರ ಅಹವಾಲು ಸ್ವೀಕಾರ ಕಾರ್ಯಕ್ರಮ ನಡೆಸಿದ್ರು..ಈ ವೇಳೆ ಸಾರ್ವಜನಿಕರು ತಾಲೂಕಿನ ಬೆಳಕೆ, ಗೊರಟೆ ಭಾಗದ ಸಾರ್ವಜನಿಕ ನಮ್ಮ ಭಾಗದಲ್ಲಿ ಈ ಮೊದಲು ಕುಂದಾಪುರದಿಂದ ಭಟ್ಕಳಕ್ಕೆ ಬರುವ ಕೆ.ಎಸ್.ಆರ್.ಟಿ. ಸಿ ಬಸ್ ನಿಲ್ಲಿಸುತ್ತಿದ್ರು. ಆದ್ರೆ ಈಗ ಆ ಬಸ್ ನಿಲ್ಲಿಸುತ್ತಿಲ್ಲ ಇದರಿಂದ ಈ ಭಾಗದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಸಚಿವರ ಬಳಿ ದೂರು ನೀಡಿದ್ರು. ತಕ್ಷಣ ಸಚಿವ ಮಂಕಾಳ್ ವೈದ್ಯ, ಕೆ.ಎಸ್.ಆರ್. ಟಿ ಸಿ. ಡಿಸಿಗೆ ಸ್ಥಳದಲ್ಲೇ ದೂರವಾಣಿ ಕರೆ ಮಾಡಿ ಭಟ್ಕಳದ ಗೊರ್ಟೆ ಕ್ರಾಸ್, ಗೊಳಿಮರ, ಬೆಳ್ಕೆ ಕ್ರಾಸ್ ಬಳಿ ಕುಂದಾಪುರದಿಂದ ಭಟ್ಕಳಕ್ಕೆ ಬರುವ ಬಸ್ ನಿಲ್ಲಿಸುವಂತೆ ಆದೇಶ ನೀಡಿದ್ರು.ಬಳಿಕ ನೂರಾರು ಸಾರ್ವಜನಿಕರು ಸಚಿವರ ಬಳಿ ತಮ್ಮ ಅಹವಾಲು ಹೇಳಿಕೊಂಡ್ರು..