ಈಡೇರಿತು ಸಿದ್ದಾಪುರ ಜನತೆಯ ಬಹುದಿನಗಳ ಬೇಡಿಕೆ – ಧರ್ಮಸ್ಥಳ ಬಸ್‌ ಸಂಚಾರಕ್ಕೆ ಚಾಲನೆ

ಸಿದ್ದಾಪುರ ತಾಲೂಕಿನ ಜನತೆಯ ಬಹು ದಿನಗಳ ಬೇಡಿಕೆಯಾಗಿದ್ದ ಧರ್ಮಸ್ಥಳ ಬಸ್ ಸಂಚಾರಕ್ಕೆ ಸಿದ್ದಾಪುರ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಲಾಯ್ತು ಸಿದ್ದಾಪುರ ತಾಲೂಕಿನ ಜನತೆಯ ಬಹು ದಿನಗಳ ಬೇಡಿಕೆಯಾಗಿದ್ದ ಧರ್ಮಸ್ಥಳ ಬಸ್ ಸಂಚಾರಕ್ಕೆ ಸಿದ್ದಾಪುರ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಲಾಯ್ತು. ಸಿದ್ದಾಪುರ ಬಸ್‌ ನಿಲ್ದಾಣದಲ್ಲಿ ಮಹಾಲಿಂಗಣ್ಣ ಕುಂದಗೋಳಮಠ ನೇತೃತ್ವದಲ್ಲಿ ನವಜಾಗೃತವೇದಿಕೆ ಸಿದ್ದಾಪುರ ಹಾಗೂ ನಾಗರಿಕರಿಂದ ಯಲ್ಲಾಪುರದಿಂದ ಸಿದ್ದಾಪುರ ಮಾರ್ಗವಾಗಿ ಧರ್ಮಸ್ಥಳಕ್ಕೆ ಹೋಗುವ ನೂತನ ಬಸ್ಸಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಲಾಯ್ತು. ಇದು ಸಿದ್ದಾಪುರ ತಾಲೂಕಿನ ಜನತೆಯ ಬಹುದಿನಗಳ ಬೇಡಿಕೆಯಾಗಿತ್ತು. ಬೇಡಿಕೆ ನೆರವೇರಿದ್ದಕ್ಕೆ ಸಿದ್ದಾಪುರದ ಜನರು ಸಿಹಿ ಹಂಚಿ ಸಂಭ್ರಮ ವ್ಯಕ್ತಪಡಿಸಿದ್ರು.ಈ ಬಸ್ಸು ಯಲ್ಲಾಪುರದಿಂದ ಬೆಳಿಗ್ಗೆ 7.15 ಕ್ಕೆ ಹೊರಟು10 ಘಂಟೆಗೆ ಸಿದ್ದಾಪುರಕ್ಕೆ ಬರಲಿದೆ. ಇಲ್ಲಿಂದ ಮಾವಿನಗುಂಡಿ, ಹೊನ್ನಾವರ, ಮಾರ್ಗವಾಗಿ 4.30 ಘಂಟೆಗೆ ಮಂಗಳೂರು ತಲುಪಿ ಸಂಜೆ 6.30 ಕ್ಕೆ ಧರ್ಮಸ್ಥಳ ತಲುಪುತ್ತದೆ. ಧರ್ಮಸ್ಥಳ ದಿಂದ ಬೆಳಿಗ್ಗೆ 8.30 ಕ್ಕೆ ಹೊರಟು ಅದೇ ಮಾರ್ಗದಲ್ಲಿ ಸಂಜೆ 7.30 ಕ್ಕೆ ಯಲ್ಲಾಪುರ ತಲುಪುತ್ತದೆ… ಈ ಸಂದರ್ಭದಲ್ಲಿ ಸಾರಿಗೆ ಸಂಚಲನಾಧಿಕಾರಿ ಪ್ರವೀಣ್ ಶೇಟ್, ಘಟಕ ವ್ಯವಸ್ಥಾಪಕ ಸರ್ವೇಶ್ವರ್ ನಾಯ್ಕ್, ಸಿಬ್ಬಂದಿ ವರ್ಗ, ನವಜಾಗೃತ ವೇದಿಕೆ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು…