ಸಿದ್ದಾಪುರ: ಕ್ಯಾದಗಿ ವ್ಯವಸಾಯ ಸೇವಾ ಸಹಕಾರಿ ಸಂಘದ 47 ನೇ ವಾರ್ಷಿಕ ಸರ್ವ ಸಾಧಾರಣ ಸಭೆ

ಸಿದ್ದಾಪುರ: ಕ್ಯಾದಗಿ ವ್ಯವಸಾಯ ಸೇವಾ ಸಹಕಾರಿ ಸಂಘದ 47 ನೇ ವಾರ್ಷಿಕ ಸರ್ವ ಸಾಧಾರಣ ಸಭೆ ಸಂಘದ ಸಭಾಂಗಣದಲ್ಲಿ ನಡೆಯಿತು . ಸಂಘದ 17 ಜನ ಹಿರಿಯ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಧ್ಯಕ್ಷ ಎಂ. ಜಿ. ನಾಯ್ಕ್ ಹಾದ್ರಿಮನೆ ಅವರು ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ ಸಂಘ ನಡೆದು ಬಂದ ಹಾದಿ ಹಾಗೂ ಪ್ರಸಕ್ತ ಸಾಲಿನ ಲಾಭ ಮುಂದಿನ ದಿನದಲ್ಲಿ ಕೈಗೊಳ್ಳಬೇಕಾದ ಯೋಜನೆ ಮುಂತಾದವು ಕುರಿತು ಮಾಹಿತಿ ನೀಡಿದರು. ಸದಸ್ಯರುಗಳು ತಮ್ಮ ಸಮಸ್ಯೆ ಅನಿಸಿಕೆ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ನಾರಾಯಣ ಗೌಡ ಅಡಾವೆ ಪತ್ರ ವಾಚಿಸಿದರು
ಸಭೆಯಲ್ಲಿ ಉಪಾಧ್ಯಕ್ಷ ಗಣೇಶ ಭಟ್ಟ ಕೆರೆಹೊಂಡ, ನಿರ್ದೇಶಕರಾದ ರವಿ ನಾಯ್ಕ ಹೆಗ್ಗಾರಕೈ, ಪರಮೇಶ್ವರ ನಾಯ್ಕ ಶಿರಗಳ್ಳೆ, ವೆಂಕಟೇಶ ಗೌಡ ಕುಂಬಾರಕುಳಿ, ಗಣಪತಿ ನಾಯ್ಕ ಹೆಗ್ಗೇರಿ, ಸುಬ್ರಾಯ ಹೆಗಡೆ ಮಕ್ಕಿಗದ್ದೆ, ನಾರಾಯಣ ಹಸ್ಲರ ಹಂದಿಮನೆ, ವಿಜಯಾ ನಾಯ್ಕ ಹಳ್ಳಿಬೈಲ್, ರಾಮಚಂದ್ರ ಹೆಗಡೆ ಬಳಲಿಗೆ, ಗೌರ್ಯ ನಾಯ್ಕ ಹೆಗ್ಗಾರಕೈ ಉಪಸ್ಥಿತರಿದ್ದರು.‌ ನಿರ್ದೇಶಕ ಕೆ ಪಿ ರಘುಪತಿ ಸ್ವಾಗತಿಸಿದರು, ನಾಮ ನಿರ್ದೇಶತ ಸದಸ್ಯ ಆರ್ ಜಿ ಹೆಗಡೆ ನಿರೂಪಿಸಿದರು ನಿರ್ದೇಶಕ ಲಕ್ಷಣ ನಾಯ್ಕ್ ವಂದಿಸಿದರು.
ಸಂಘದ ಕಿರಾಣಿ ವಿಭಾಗದಲ್ಲಿ ಅತೀ ಹೆಚ್ಚು ಕಿರಾಣಿ ಖರೀದಿಸಿದ ಮೂವರಿಗೆ ಬಹುಮಾನ ನೀಡಲಾಯಿತು.ಸುಬ್ರಾಯ ಗಣಪತಿ ಹೆಗಡೆ ಮಕ್ಕಿಗದ್ದೆ ಪ್ರಥಮ, ಅಶೋಕ್ ಜಯಂತ್ ನಾಯ್ಕ್ ಕ್ಯಾದಗಿ ದ್ವಿತೀಯ , ಕನ್ನೇ ತಿಮ್ಮ ನಾಯ್ಕ್ ಹೊಳಗೆರೆಕೆರೆ ತೃತೀಯ ಬಹುಮಾನ ಪಡೆದುಕೊಂಡರು.