ಸಿದ್ದಾಪುರ :ಯೋಧರ ಸಂಸ್ಮರಣೆ ಹಾಗೂ ಇಟಗಿ ಸ್ವಾತಂತ್ರ್ಯ ಕಥನದ ಲೋಕಾರ್ಪಣೆ ಕಾರ್ಯಕ್ರಮ

ಸಿದ್ದಾಪುರ : ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಇಟಗಿ ಗ್ರಾಮದ ಸ್ವಾತಂತ್ರ್ಯ ಯೋಧರ ಸಂಸ್ಮರಣೆ ಹಾಗೂ ಇಟಗಿ ಸ್ವಾತಂತ್ರ್ಯ ಕಥನದ ಲೋಕಾರ್ಪಣೆ ಕಾರ್ಯಕ್ರಮ ಹೊನ್ನೇಘಟಗಿ ಶಾಲಾ ಸಭಾಂಗಣದಲ್ಲಿ ನಡೆಯಿತು . ಕಾರ್ಯಕ್ರಮದ ಉದ್ಘಾಟನೆಯನ್ನ ಸ್ಥಳೀಯ ಶಾಸಕ ಭೀಮಣ್ಣ ನಾಯ್ಕ್ ನೆರವೇರಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಮಾಂಕಾಳ್ ವೈದ್ಯ ಇಟಗಿ ಸ್ವಾತಂತ್ರ್ಯ ಹೋರಾಟ ಕಥನ ಪುಸ್ತಕ ಲೋಕಾರ್ಪಣೆ ನೆರವೇರಿಸಿದರು. ಸ್ಥಳೀಯ ಸ್ವಾತಂತ್ರ್ಯ ಯೋಧರ ಕುಟುಂಬಸ್ಥರ ಸದಸ್ಯರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ರವೀಂದ್ರ ಭಟ್, ಗೋಪಾಲ ಕೃಷ್ಣ ವೈದ್ಯ, ಆರ್. ಎಂ. ಹೆಗಡೆ, ರಾಮಚಂದ್ರ ನಾಯ್ಕ್, ವಿಜಯ ಹೆಗಡೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಜೆ ಪಿ ಎನ್ ಹೆಗಡೆ ಹಾಗೂ ಪದಾಧಿಕಾರಿಗಳು, ವಾಜಗೋಡ ಗ್ರಾಮ ಪಂಚಾಯತ್ ಅಧ್ಯಕ್ಷೆ ಸರಸ್ವತಿ ಗೌಡ, ಎಸ್ ಎಂ ಭಟ್ ಸದಸ್ಯ ಸುರೇಶ್ ನಾಯ್ಕ್ ಜಿ ಪಂ ಮಾಜಿ ಸದಸ್ಯ ಎಸ್ ಆರ್ ಹೆಗಡೆ, ಇಂದಿರಾ ನಾಯ್ಕ್ ಸ್ಥಳೀಯ ಸಾರ್ವಜನಿಕರು ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು