ಸೆ.4 ರಂದು ಡೊಂಬೆಕೈ ಕ್ರಾಸ್ ಕಡಲೆ ಹನುಮಂತ ದೇವರ ವಿಶೇಷ ಅಭಿಷೇಕ ಪೂಜೆ

ಸಿದ್ದಾಪುರ : ತಾಲೂಕಿನ ಭುವನಗಿರಿ ಸಮೀಪದ ಡೊಂಬೆಕೈ ಕ್ರಾಸ್ ನಲ್ಲಿರುವ ಕಡಲೆ ಹನುಮಂತ ದೇವಸ್ಥಾನದಲ್ಲಿ ಶ್ರಾವಣ ಮಾಸದ ಸೋಮವಾರ ಸೆಪ್ಟೆಂಬರ್4 ರಂದು ವಿಶೇಷ ಅಭಿಷೇಕ ಪೂಜೆ ಹಮ್ಮಿಕೊಳ್ಳಲಾಗಿದೆ. ಹಿಂದೆ ಚಿಕ್ಕದಾದ ಗುಡಿ ಇದ್ದಾಗ ಸಾರ್ವಜನಿಕರು ತಾವೇ ಸ್ವತಃ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸುವ ಪದ್ಧತಿ ಇತ್ತು. ನೂತನವಾದ ದೇವಸ್ಥಾನವನ್ನು ನಿರ್ಮಾಣ ಮಾಡಿದ ನಂತರ ಸಾರ್ವಜನಿಕರಿಗೆ ಗರ್ಭಗುಡಿಯೊಳಗೆ ಪ್ರವೇಶಕ್ಕೆ ಅವಕಾಶವಿರಲಿಲ್ಲ. ಆಡಳಿತ ಸಮಿತಿಯವರ ತೀರ್ಮಾನದಂತೆ ವರ್ಷದಲ್ಲಿ ಒಂದು ದಿನ ಎಲ್ಲಾ ಭಕ್ತಾಧಿಗಳಿಗೆ ಶ್ರಾವಣ ಮಾಸದಲ್ಲಿ ಗರ್ಭಗೃಹ ಪ್ರವೇಶಮಾಡಿ ಅಭಿಷೇಕ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ವರ್ಷ ಸೆಪ್ಟೆಂಬರ್ 4 ಸೋಮವಾರದಂದು ಸಾರ್ವಜನಿಕರಿಗೆ ಗರ್ಭಗುಡಿ ಪ್ರವೇಶಿಸಿ ಅಭಿಷೇಕ ಪೂಜೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ ಎಂಟು ಗಂಟೆಯಿಂದ ಮಧ್ಯಾಹ್ನ 12:30 ವರೆಗೆ ಭಕ್ತಾದಿಗಳು ಈ ಸೇವೆಯನ್ನು ಸಲ್ಲಿಸಬಹುದೆಂದು ಆಡಳಿತ ಮಂಡಳಿಯ ಅಧ್ಯಕ್ಷ ವಿ.ಎಂ.ಭಟ್ಟ ಡೊಂಬೆಕೈ, ಉಪಾಧ್ಯಕ್ಷ ಪ್ರಶಾಂತ ಕುಂಬ್ರಿಗದ್ದೆ ಮತ್ತು ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.