ಸಿದ್ದಾಪುರ : ಶಿಕ್ಷಣ ಪ್ರೇಮಿ, ಕಲಾ, ಕ್ರೀಡೆ ಪ್ರೋತ್ಸಾಹಕ, ಕೊಡುಗೈ ದಾನಿ ಹಿರಿಯ ವಕೀಲರು ಆದ ಜಿ. ಟಿ. ನಾಯ್ಕ್

ಸಿದ್ದಾಪುರ : ಶಿಕ್ಷಣ ಪ್ರೇಮಿ, ಕಲಾ, ಕ್ರೀಡೆ ಪ್ರೋತ್ಸಾಹಕ, ಕೊಡುಗೈ ದಾನಿ ಹಿರಿಯ ವಕೀಲರು ಆದ ಜಿ. ಟಿ. ನಾಯ್ಕ್ ಕಾರವಾರ ರವರ ಹುಟ್ಟುಹಬ್ಬದ ಪ್ರಯುಕ್ತ ಅವರ ಅಭಿಮಾನಿಗಳಿಂದ ತಾಲೂಕಿನ ಆರ್ ವಿ ಪ್ರೌಢ ಶಾಲೆ ಇಟಗಿಯಲ್ಲಿ ವಿದ್ಯಾರ್ಥಿ ಗಳಿಗೆ ಆಶು ಭಾಷಣ ಸ್ಪರ್ಧೆ ಏರ್ಪಡಿಸಿ ಆಯ್ಕೆಯಾದ ಮೂವರು ವಿದ್ಯಾರ್ಥಿ ಗಳಿಗೆ ಪ್ರಥಮ ದ್ವಿತೀಯ ತೃತೀಯ ಬಹುಮಾನ ವಿತರಿಸಿ ಭಾಗವಹಿಸಿದವರಿಗೆ ಪೆನ್ ಹಾಗೂ ಸಿಹಿ ನೀಡಿಲಾಯಿತು.
ಶಾಲೆಯ ಮುಕ್ಯೋಪಾಧ್ಯಾಯ ಡಿ ಜಿ ಪೂಜಾರ್ ಅಧ್ಯಕ್ಷತೆ ವಹಿಸಿ ನಮ್ಮ ಶಾಲೆಯಲ್ಲಿ ಓದಿದ ವಿದ್ಯಾರ್ಥಿ ಇಂದು ಕಾರವಾರದಲ್ಲಿ ವಕೀಲ ವೃತ್ತಿಯಲ್ಲಿ ಹೆಸರು ಮಾಡಿದ್ದು ದಾನ ಧರ್ಮಗಳನ್ನು ಮಾಡುತ್ತಾ ಇತರರಿಗೆ ಮಾದರಿಯಾಗಿದ್ದಾರೆ, ಇವರ ಅಭಿಮಾನಿಗಳು ಇಂದು ನಮ್ಮ ಶಾಲೆಯಲ್ಲಿ ಐ ರೀತಿಯಾಗಿ ವಿಶೇಷ ಕಾರ್ಯಕ್ರಮ ಆಯೋಜಿಸಿರುವುದು ನಮಗೆ ಸಂತಸ ತಂದಿದೆ ನೀವು ಸಹ ಶಾಲೆಯಲ್ಲಿ ಓದುತ್ತಿದ್ದೀರಾ ನೀವು ಸಹ ಓದಿನಲ್ಲಿ ಗಮನ ಹರಿಸಿ ಹೆಚ್ಚಿನ ಸಾಧನೆ ಮಾಡಿ ಇತರರಿಗೆ ಮಾದರಿಯಾಗಬೇಕು ಎನ್ನುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು. ಅಭಿಮಾನಿ ಸಂಘದ ದಿವಾಕರ್ ಸಂಪಖಂಡ ಮಾತನಾಡಿ ನಿಮಗೆ ನಿಮ್ಮ ಪಾಲಕರು ಅವರ ಕಷ್ಟದಲ್ಲೂ ಸಹ ಓದಿಸುತ್ತಿದ್ದಾರೆ ಇದನ್ನು ಅರಿತು ಹೆಚ್ಚಿನ ಅಂಕಗಳನ್ನು ಪಡೆದು ಪ್ರತಿಭಾನ್ವಿತರಾಗಬೇಕು ವಿವಿಧ ಸ್ಪರ್ಧೆ ಹಾಗೂ ಕಾರ್ಯಕ್ರಮ ಗಳಲ್ಲಿ ಭಾಗವಹಿಸಿ ಸಾಧನೆಯನ್ನು ಮಾಡಿ ಭವಿಷ್ಯ ರೂಪಿಸಿಕೊಳ್ಳಿ ಎಂದರು. ಎನ್ ಎಸ್ ಯು ಐ ಜಿಲ್ಲಾಧ್ಯಕ್ಷ ಹಾಗೂ ಅಭಿಮಾನಿ ಸಂಘದ ಸದಸ್ಯ ವಿಶ್ವ ಗೌಡ ಮಾತನಾಡಿ ಜಿ. ಟಿ. ನಾಯ್ಕ್ ರವರು ಕಷ್ಟ ಎಂದು ಹೋದವರಿಗೆ ದಾನ ಧರ್ಮಗಳನ್ನು ಮಾಡುತ್ತಾ ಇತರರಿಗೆ ಮಾದರಿಯಾಗಿದ್ದಾರೆ ಅವರು ಕೇವಲ ತಮ್ಮ ವೃತ್ತಿಯನ್ನು ಮಾಡುತ್ತ ಇದ್ದರೆ ನಾವು ಇಂದು ಅವರ ಹುಟ್ಟುಹಬ್ಬವನ್ನು ಇಲ್ಲಿ ಆಚರಿಸುತ್ತಿರಲು ಆಗುತ್ತಿರಲಿಲ್ಲ ವಿದ್ಯಾರ್ಥಿ ಗಳಾದ ನೀವು ಇಂತಹ ಕಾರ್ಯಕ್ರಮಗಳಲ್ಲಿ ಧೈರ್ಯದಿಂದ ಭಾಗವಹಿಸಿ ಹೆಚ್ಚು ಹೆಚ್ಚು ತಿಳಿದುಕೊಂಡು ನಾಯಕತ್ವದ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದರು.
ನಂತರ ಸರಕಾರಿ ಪ್ರಾಥಮಿಕ ಶಾಲೆ ಮೆಣಸಿಯಲ್ಲಿ ವಿದ್ಯಾರ್ಥಿ ಗಳಿಗೆ ಸಿಹಿ ವಿತರಿಸಿ ಶಾಲೆಯ ಎಲ್ಲ ಮಕ್ಕಳಿಗೆ ಪೆನ್ ನೀಡಿದರು. ಅಭಿಮಾನಿಗಳು ಜಿ ಟಿ ನಾಯ್ಕ್ ರವರಿಗೆ ಮುಂದಿನ ದಿನದಲ್ಲಿ ಆಯುಷ್ಯ ಅರೋಗ್ಯ ಹಾಗೂ ಹೆಚ್ಚಿನ ಸ್ಥಾನ ಮಾನ ನೀಡುವಂತೆ ಪ್ರಾರ್ಥಿಸಿ ಇಟಗಿ ರಾಮೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.
ಆಶು ಭಾಷಣ ಸ್ಪರ್ಧೆಯಲ್ಲಿ ರಶ್ಮಿ ಪಿ ಗೌಡ ಪ್ರಥಮ, ಶರದಿ ಎಸ್ ಹೆಗಡೆ ದ್ವಿತೀಯ, ತೇಜಸ್ ಎಸ್ ಹೆಗಡೆ ತೃತೀಯ ಬಹುಮಾನ ಪಡೆದುಕೊಂಡರು .
ಶಾಲೆಯ ಶಿಕ್ಷಕರು ಸಹಕರಿಸಿದರು. ಈ ಸಂದರ್ಭದಲ್ಲಿ ಸಂಘದ ಸದಸ್ಯರುಗಳಾದ ಅನಿಲ್ ಕೊಠಾರಿ, ಪುರಂದರ ನಾಯ್ಕ್, ಜಗದೀಶ್ ಅವರಗುಪ್ಪ ಮುಂತಾದವರು ಉಪಸ್ಥಿತರಿದ್ದರು.