ಸಿದ್ದಾಪುರ :ಕುಡೆಗೋಡ್ ಶಾಲೆಯ ಹಿಂಭಾಗದ ಧರೆ ಕುಸಿತ

ಸಿದ್ದಾಪುರ : ತಾಲೂಕಿನ ದೊಡ್ಮನೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಡೆಗೋಡ್ ಶಾಲೆಯ ಹಿಂಭಾಗದ ಧರೆ ಕುಸಿದಿದ್ದು ಮಕ್ಕಳಿಗೆ ಅಪಾಯಗಳಾಗುವಂತಹ ಮುನ್ಸೂಚನೆಗಳು ಕಂಡುಬರುತ್ತಿವೆ ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸೂಕ್ತ ರೀತಿಯ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ತಾಲೂಕ ಕಾಂಗ್ರೆಸ್ ಯುವ ಘಟಕದ ಉಪಾಧ್ಯಕ್ಷ ಹರೀಶ್ ನಾಯ್ಕ್ ಹಸ್ವಿಗೊಳಿ ಒತ್ತಾಯಿಸಿದ್ದಾರೆ.
ಕಳೆದ ಮಳೆಗಾಲದ ಸಂದರ್ಭದಲ್ಲಿ ಇಲ್ಲಿ ಧರೆ ಕುಸಿದು ಮಣ್ಣು ಜಾರಿ ಶಾಲೆಯ ಹತ್ತಿರಕ್ಕೆ ಬಂದಿದೆ ಇದರಿಂದ ಮಕ್ಕಳಿಗೆ ಆಟವಾಡಲು ಓಡಾಡಲು ಹಲವು ರೀತಿಯಲ್ಲಿ ತೊಂದರೆ ಉಂಟಾಗುತ್ತಿದೆ, ಅಲ್ಲದೆ ಮುಂದಿನ ದಿನಗಳಲ್ಲಿ ಅಪಾಯವಾಗುವಂತಹ ಮುನ್ಸೂಚನೆಗಳು ಕಂಡುಬರುತ್ತಿವೆ, ಇಂತಹ ಘಟನೆ ನಡೆಯುವ ಮುನ್ನವೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಸೂಕ್ತ ಸುರಕ್ಷಿತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ” ಈ ಪ್ರದೇಶ ತಾಲೂಕಿನಿಂದ ಅತಿ ದೂರ ಇರುವ ಸ್ಥಳವಾಗಿದೆ ಇಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಸಹ ಇದೆ ಹೆಚ್ಚಿನ ಮಳೆ ಬೀಳುವ ಈ ಪ್ರದೇಶದಲ್ಲಿ ಈ ರೀತಿಯ ಘಟನೆ ಗಳು ಆಗಾಗ ಆಗುತ್ತ ಇರುತ್ತವೆ ಆದ್ದರಿಂದ ಅಪಾಯವಾಗುವ ಮುನ್ಸೂಚನೆ ಕಂಡು ಬರುತ್ತಿದೆ ಕೂಡಲೇ ಇಲ್ಲಿ ಮಣ್ಣನ್ನ ತೆರವು ಮಾಡುವ ಕ್ರಮ ಕೈಗೊಳ್ಳಬೇಕಿದೆ “
ಹರೀಶ್ ನಾಯ್ಕ್ ಹಸ್ವಿಗೊಳಿ ತಾಲೂಕ ಕಾಂಗ್ರೆಸ್ ಯುವ ಘಟಕದ ಉಪಾಧ್ಯಕ್ಷ