ಜೋಯಿಡಾ: ಯರಮುಖದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ರಕ್ಷಾ ಬಂಧನ ಕಾರ್ಯಕ್ರಮ.

ಜೋಯಿಡಾ : ತಾಲೂಕಿನ ಯರಮುಖದ ಜನತಾ ಕಾಲೋನಿಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಗುಂದ ಶಾಖೆಯ ವತಿಯಿಂದ ರಕ್ಷಾ ಬಂಧನ ಕಾರ್ಯಕ್ರಮವನ್ನು ಭಾನುವಾರ ಸಂಜೆ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಗುಂದ ಶಾಖೆಯ ಮುಖ್ಯಸ್ಥ ಜಿ.ಆರ್.ಭಟ್ಟ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ವರ್ಷವೂ ರಕ್ಷಾ ಬಂಧನ ಕಾರ್ಯಕ್ರಮ ದೇಶದಾಧ್ಯಂತ ನಡೆಯುತ್ತದೆ. ದೇಶದ ರಕ್ಷಣೆಗಾಗಿ ಹಾಗೂ ದೇಶದ ಜನರ ರಕ್ಷಣೆಗಾಗಿ ಈ ಸಂಘ ದುಡಿಯುತ್ತಿದೆ, ಪ್ರೀತಿ , ಸ್ನೇಹ ,ಸಹಬಾಳ್ವೆಯಿಂದ ನಡೆಯುವುದೆ ಸಂಘದ ಉದ್ದೇಶವಾಗಿದೆ ಎಂದರು.

ಈ ಸಂದರ್ಭದಲ್ಲಿ ನಂದಿಗದ್ದಾ ಸಹಕಾರಿ ಸಂಘದ ಉಪಾಧ್ಯಕ್ಷ ಸುದರ್ಶನ ಭಾಗ್ವತ, ಬಿಜೆಪಿ ಘಟಕಾಧ್ಯಕ್ಷ ಶಶಿಕಾಂತ ಹೆಗಡೆ, ಹಿರಿಯರಾದ ಲಕ್ಷಣ ಸಿದ್ದಿ ,ಕಾರ್ತಿಕ ದೇಸಾಯಿ ಇತರರು ಉಪಸ್ಥಿತರಿದ್ದರು .