ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಹೊನ್ನಾವರದ ಕುವರ

ಹೊನ್ನಾವರ : ಬೆಂಗಳೂರು ಕಾನೂನು ಅಧ್ಯಯನ ಸಂಸ್ಥೆ ಮಹಾವಿದ್ಯಾಲಯದಲ್ಲಿ ಪ್ರಥಮ ವರ್ಷದ ಎಲ್ ಎಲ್ ಬಿ ಓದುತ್ತಿರುವ ವಿದ್ಯಾರ್ಥಿ ಲಕ್ಷ್ಮಿಶ್ ಮರಾಠಿ ಇತ್ತೀಚೆಗೆ ಕಾನೂನು ಸಂಸದೀಯ ಇಲಾಖೆಯಿಂದ ಆಯೋಜಿಸಲ್ಪಟ್ಟ ರಾಜ್ಯಮಟ್ಟದ ಯುವ ಸಂಸತ್ತಿನಲ್ಲಿ ಭಾಗವಹಿಸಿ 12ನೇ ರಾಂಕ್ ಪಡೆದು, ಇದೀಗ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿ ಲಕ್ಷ್ಮೀಶ್ ಮೂಲತಃ ಹೊನ್ನಾವರ ತಾಲೂಕಿನ ಮುರಗೋಳಿ ಎಂಬ ಗ್ರಾಮದವನು.

ದಿನಾಂಕ 4 ಅಗಸ್ಟ್ 2023 ರಿಂದ 6 ಆಗಸ್ಟ್ 2023 ರ ವರೆಗೆ ವಿಧಾನಸೌಧ ಆವರಣದಲ್ಲಿ ಕಾರ್ಯಕ್ರಮ ಜರುಗಿದ್ದು, ಒಟ್ಟು 210 ಅಭ್ಯರ್ಥಿಗಳು ಎಲ್ಲಾ ಕ್ಷೇತ್ರಗಳಿಂದಲೂ ಭಾಗವಹಿಸಿದ್ದರು. ಇದರಲ್ಲಿ ಕುಮಾರ್ ಲಕ್ಷ್ಮೀಶ್ 12ನೇ ಸ್ಥಾನ ಪಡೆದು ರಾಷ್ಟ್ರಮಟ್ಟದಲ್ಲಿ ನಡೆಯುವ ಯುವ ಸಂಸತ್ 2024ಕ್ಕೆ ಕರ್ನಾಟಕದ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದು, ಹೊನ್ನಾವರ ತಾಲೂಕಿಗೆ ಹೆಮ್ಮೆಯ ವಿಷಯವಾಗಿದೆ.