77 ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ವಾಜಗೋಡ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯ

ಸಿದ್ದಾಪುರ : 77 ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ವಾಜಗೋಡ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಯುವಕರು ಬಸ್ ನಿಲ್ದಾಣಗಳನ್ನು ಸ್ವಚ್ಛಗೊಳಿಸಿ ಗಮನ ಸೆಳೆದರು.
ಮಂಗಳವಾರ ಆಚರಿಸಲಿರುವ ಸ್ವಾತಂತ್ಯೋತ್ಸವ ನಿಮಿತ್ತ ವಾಗಿ ಪಂಚಾಯತ್ ವ್ಯಾಪ್ತಿಯ ಆಸಕ್ತಿಯುಳ್ಳ ಯುವಕರು ಪಂಚಾಯತ್ ಸದಸ್ಯ ಕೃಷ್ಣಮೂರ್ತಿ ನಾಯ್ಕ್ ನೇತೃತ್ವದಲ್ಲಿ ದಾನಮಾವ ವಾರ್ಡಿನ 8 ಬಸ್ ನಿಲ್ದಾಣಗಳನ್ನು ಸ್ವಚ್ಛಗೊಳಿಸಿದರು.
ಸ್ವಚ್ಛತೆ ಇಲ್ಲದೆ ಬಸ್ ನಿಲ್ದಾಣಗಳು ಕಸ ಕಡ್ಡಿ ದೂಳುಗಳಿಂದ ತುಂಬಿಕೊಂಡಿದ್ದು ಪ್ರಯಾಣಿಕರಿಗೆ ದಿನನಿತ್ಯ ಬಸ್ ನಿಲ್ದಾಣಗಳಲ್ಲಿ ಕುಳಿತುಕೊಳ್ಳಲು ಹಲವು ರೀತಿಯ ತೊಂದರೆಗಳು ಉಂಟಾಗುತ್ತಿದ್ದವು ಇದನ್ನ ಗಮನಿಸಿದ ಯುವಕರು ಸ್ವಾತಂತ್ರ್ಯೋತ್ಸವದ ನಿಮಿತ್ತ ಕೆಲಸ ಮಾಡಿರುವುದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.
ಈ ಸಂದರ್ಭದಲ್ಲಿ ಸಂದೇಶ ಆಚಾರಿ, ಹರೀಶ್ ಇಟಗಿತೋಟ ಮುಂತಾದವರು ಉಪಸ್ಥಿತರಿದ್ದರು.