“ಚೆಸ್ “ಸ್ಪರ್ಧೆ-ಜಿಲ್ಲಾ ಮಟ್ಟಕ್ಕೆ ರಜತ ಮತ್ತು ಸಾಯೀಸಮರ್ಥ ಆಯ್ಕೆ


ಸಿದ್ದಾಪುರ : ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ( ಕರ್ನಾಟಕ ಸರಕಾರ,)ವತಿಯಿಂದ 77ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸಿದ್ದಾಪುರದ ಲಯನ ಬಾಲಭವನದಲ್ಲಿ ನಡೆದ ತಾಲೂಕಾ ಮಟ್ಟದ “ಚೆಸ್ “ಪಂದ್ಯಾವಳಿಯಲ್ಲಿ ಸಿದ್ದಾಪುರದ ಪ್ರಶಾಂತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಸಾಯೀಸಮರ್ಥ ನಾಗರಾಜ ಶೇಟ ಮತ್ತು ರಜತ ವಿನಾಯಕ ಶೇಟ, ಕ್ರಮ ವಾಗಿ ಪ್ರಾಥಮಿಕ ಶಾಲಾವಿಭಾಗ ಮತ್ತು ಮಾದ್ಯಮಿಕ ಶಾಲಾವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಪಾಲಕರು,
ಪ್ರಶಾಂತಿ ಶಾಲೆಯ ಆಡಳಿತ ಮಂಡಳಿ, ಶಿಕ್ಷಕ ವೃಂದದವರು ಹರ್ಷ ವ್ಯಕ್ತಪಡಿಸಿದ್ದಾರೆ