ಸ್ವಾತಂತ್ರ್ಯೋತ್ಸವ ಆಚರಿಸಲು ಹೊರಟ ಶಿಕ್ಷಕ ಸ್ಮಶಾನ ಸೇರಿದ

ಕುಮಟಾ : ಇಂದು ಶಾಲೆಗೆ ಧ್ವಜ ಹಾರಿಸಲು ಬೆಳಿಗ್ಗೆ ಬೈಕ್ ಏರಿ ಹೊರಟ ಶಿಕ್ಷಕನೋರ್ವ ಅಪಘಾತಕ್ಕೀಡಾಗಿ, ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಹಳಕಾರ್ ಕ್ರಾಸ್ ಬಳಿ ನಡೆದಿದೆ.

ಹೆಗಡೆ ಗ್ರಾಮದ ಮೇಲಿನಕೇರಿ‌ ನಿವಾಸಿ ಗೋಪಾಲ ಪಟಗಾರ (50) ಎಂಬಾತನೇ ಮೃತ ದುರ್ದೈವಿ. ಇವರು ಗುಡೇಅಂಗಡಿ ಶಾಲೆಯ ಶಿಕ್ಷಕರಾಗಿದ್ದು, ಇಂದು ಬೆಳಗಿನ ಜಾವ ಧ್ವಜಾರೋಹಣಕ್ಕೆಂದು ತಮ್ಮ ಮನೆಯಿಂದ ಬೈಕ್ ಏರಿ ಹೊರಟಿದ್ದರು. ಇವರು ಹಳಕಾರ್ ಕ್ರಾಸ್ ಬಳಿ ಬರುತ್ತಿದ್ದಾಗ, ಅದೆಲ್ಲಿತ್ತೋ ಬೊಲೆರೋ ವಾಹನ, ಹಿಂದಿನಿಂದ ವೇಗವಾಗಿ ಬಂದು ಇವರ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ತೀವೃವಾಗಿ ಗಾಯಗೊಂಡು ಗೋಪಾಲ ಪಟಗಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ..

ಸ್ಥಳಕ್ಕೆ ಆಗಮಿಸಿದ ಕುಮಟಾ ಠಾಣೆಯ ಪೋಲೀಸರು ಪ್ರಕರಣ ದಾಖಲಿಸಿಕೊಂಡು, ಅಪಘಾತ ಮಾಡಿದ ವಾಹನವನ್ನು ಜಪ್ತಿ ಮಾಡಿದ್ದಾರೆ..