ಸ್ವಾತಂತ್ರ್ಯೋತ್ಸವದ ಪ್ರಯುಕ್ತ ರಸ್ತೆ ಅಕ್ಕಪಕ್ಕ ಸ್ವಚ್ಛತೆ ಹಾಗೂ ಗಿಡ ನೆಡುವ ಮೂಲಕ ಮಾದರಿ ಕಾರ್ಯ.


ಸಿದ್ದಾಪುರ : 77ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ತ್ಯಾಗಲಿ ಗ್ರಾಮ ಪಂಚಾಯತ ವತಿಯಿಂದ ಹಾಗೂ ಪಂಚಾಯತ್ ವ್ಯಾಪ್ತಿಯ ಯುವಕರಿಂದ ಮಾವಿನಕೊಪ್ಪ ಬಸ್ ಸ್ಟ್ಯಾಂಡ್ ನಿಂದ ನಾಣೆಕಟ್ಟ ವರೆಗೆ ಸ್ವಚ್ಛತೆ ಹಾಗೂ ಶಿರ್ಲಗದ್ದೆ ಫಾಲ್ಸ್ ವರೆಗೆ ಗಿಡ ನೆಡುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಹಾಜರಿದ್ದರು.
ಕಾರ್ಯಕ್ರಮದ ಮುಂದಾಳತ್ವವನ್ನು ಯೋಗಾನಂದ ನಾಯ್ಕ್(Yogananda Naik) ಇಬ್ರಾಹಿಂ,(Ibrahim) ಸಚಿನ್,(Sachin) ರವಿ,(Ravi) ಹಾಗೂ ಪಂಚಾಯತ್ ವ್ಯಾಪ್ತಿಯ ಆಸಕ್ತ ಯುವಕರು ವಹಿಸಿಕೊಂಡಿದ್ದರು.