ಸಿದ್ದಾಪುರ : ತಾಲೂಕಿನಲ್ಲಿ ಸುರಿದ ಭಾರಿ ಗಾಳಿ ಮಳೆಯಿಂದ ವಾಸದ ಮನೆಗಳಿಗೆ ಹಾಗೂ ತೋಟಕ್ಕೆ ಹಾನಿ

ಸಿದ್ದಾಪುರ : ತಾಲೂಕಿನಲ್ಲಿ ಸುರಿದ ಭಾರಿ ಗಾಳಿ ಮಳೆಯಿಂದ ವಾಸದ ಮನೆಗಳಿಗೆ ಹಾಗೂ ತೋಟಕ್ಕೆ ಹಾನಿ ಉಂಟುಮಾಡಿದೆ
ಹುಕ್ಕಳಿ ಸಮೀಪದ ಮಳ್ಳಿಬೈಲ್ ನ
ಬೀರ ಅಮ್ಮು ಗೌಡ ರವರ ಮಾಲ್ಕಿ ಸ.ನಂ 26 ರ ಮೇಲೆ ದರೆ ಕುಸಿದು ಮರ ಬಿದ್ದು ಸುಮಾರು 18 ಅಡಿಕೆ ಮರಗಳು ಹಾನಿ ಆಗಿದ್ದು, ಸುಮಾರು 20,000 ರೂ ಹಾನಿ ಆಗಿರುತ್ತದೆ
ಮಲ್ಲೇನಹಳ್ಳಿಯಲ್ಲಿ ಕೆರೆದೇವಿ ಕರಿಯಪ್ಪ ಗೌಡ ರವರ ವಾಸದ ಕಚ್ಚಾ ಮನೆಯ ಗೋಡೆ ತೇವಾಂಶದಿಂದ ಕುಸಿದು ಅಂದಾಜು 16,000 ರೂ ಹಾನಿ ಯಾಗಿದೆ . ಯಾವುದೇ ಜೀವ ಹಾನಿ ಆಗಿರುವುದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ