ಸಿದ್ದಾಪುರ : ತಾಲೂಕಿನ ಹಲವೆಡೆ ವಾಸ್ತವ್ಯದ ಮನೆಗಳಿಗೆ ಹಾನಿ

ಸಿದ್ದಾಪುರ : ಕಳೆದ ಎರಡು ದಿನಗಳಿಂದ ಮಳೆ ಅಬ್ಬರ ಸ್ವಲ್ಪ ಕಡಿಮೆ ಆದರೂ ಸಹ ಮಳೆಯಿಂದ ಹಾನಿ ಮಾತ್ರ ಕಡಿಮೆ ಆಗದೆ ತಾಲೂಕಿನ ಹಲವೆಡೆ ವಾಸ್ತವ್ಯದ ಮನೆಗಳಿಗೆ ಹಾನಿಯಾದ ಮಾಹಿತಿ ಲಭ್ಯವಾಗಿದೆ
ಹಾರ್ಸಿಕಟ್ಟಾ ಸಮೀಪದ ಮುಟ್ಟಳ್ಳಿ ಗ್ರಾಮದ ಮಹಾಲಕ್ಷ್ಮಿ ನಾರಾಯಣ ನಾಯ್ಕ ರವರ ವಾಸ್ತವ್ಯದ ಕಚ್ಚಾ ಮನೆ ಬಿದ್ದು ಸಂಪೂರ್ಣ ಹಾನಿಯಾಗುತ್ತದೆ. ಇಂಜಿನಿಯರ್ ಮತ್ತು ನೋಡೆಲ್ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ನೀಡಿದ್ದಾರೆ
ಮಂಜುನಾಥ್ ಗಣಪತಿ ಹರಿಜನ ಹಳ್ಳಿಬೈಲ್ ಚಪ್ಪರಮನೆ ಇವರ ವಾಸದ ಕಚ್ಚಾ ಮನೆಯ ಮೇಲ್ಚಾವಣಿ ಬಿದ್ದು ಭಾಗಶಃ ಹಾನಿಯಾಗಿರುತ್ತದೆ ಅಂದಾಜು 20,000 ಹಾನಿಯಾಗಿರುತ್ತದೆ
ಈ ಸಂದರ್ಭದಲ್ಲಿ ಮಂಜುನಾಥ್ ರವರಿಗೆ ಸ್ವಲ್ಪ ತಲೆಗೆ ಪೆಟ್ಟಾಗಿದ್ದು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆದುಕೊಂಡು ಮನೆಗೆ ಬಂದಿದ್ದು ಚೇತರಿಸಿಕೊಂಡಿದ್ದಾರೆ
ಮೂಡಳ್ಳಿ ಗ್ರಾಮದ ದೇವಕಿ ಹುಲಿಯಾ ಗೌಡ ಇವರ ವಾಸ್ತವ್ಯದ ಕಚ್ಚಾ ಮನೆಯ ಪಕ್ಕದ ಕೋಣೆಯ ಮಣ್ಣಿನ ಗೋಡೆ ಮಳೆಗೆ ಕುಸಿದಿದ್ದು ಅಂದಾಜು 7000 ರೂ ಹಾನಿಯಾಗಿದೆ
ಅಳವಳ್ಳಿ ಗ್ರಾಮದ ಕಾನಳ್ಳಿಯಲ್ಲಿ ಮನೆಯ ಅಡುಗೆ ಕೋಣೆಯ ಗೋಡೆ ಕುಸಿದು ನಷ್ಟವಾಗಿದೆ ಗಣಪತಿ ನಾಯ್ಕ್ ಕಾನಳ್ಳಿ ಎನ್ನುವವರಿಗೆ ಸೇರಿದ ಮನೆಯಾಗಿದ್ದು ಸುಮಾರು 20 ಸಾವಿರ ರೂ ಹಾನಿ ಆಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.