ಇಝಾನ್ ಮಹಮ್ಮದ್ ಸಬೂರ ಅವರಿಗೆ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಸದ್ಬಾವನಾ ಪ್ರಶಸ್ತಿಯ ಗೌರವ

ಜೋಯಿಡಾ : ತಾಲ್ಲೂಕಿನ ಜಿಲ್ಲಾ ಪಂಚಾಯತ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರಾದ ಇಝಾನ್ ಮಹಮ್ಮದ್ ಸಬೂರ ಅವರು ಭಾರತ ರತ್ನ ಸರ್.ಎಂ .ವಿಶ್ವೇಶ್ವರಯ್ಯ ಸದ್ಬಾವನಾ ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿದ್ದಾರೆ.

ಬೆಂಗಳೂರಿನ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಮೀಟಿಯ ವತಿಯಿಂದ ಕೊಡಮಾಡುವ ಈ ಪ್ರಶಸ್ತಿಯನ್ನು ಗುರುವಾರ ಬೆಂಗಳೂರಿನ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಮೀಟಿಯ ಪ್ರಮುಖರು ಜೋಯಿಡಾದ ಜಿಲ್ಲಾ ಪಂಚಾಯತ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಕಚೇರಿಗೆ ಭೇಟಿ‌ ನೀಡಿ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಸದ್ಬಾವನಾ ಪ್ರಶಸ್ತಿಯನ್ನು ಇಝಾನ್ ಮಹಮ್ಮದ್ ಸಬೂರ ಅವರಿಗೆ ಪ್ರಧಾನ‌‌ ಮಾಡಿದರು.

ಜೋಯಿಡಾ ತಾಲೂಕಿನ ಜಿಲ್ಲಾ ಪಂಚಾಯತ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರಾಗಿ ಕಳೆದ 3 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಇಝಾನ್ ಮಹಮ್ಮದ್ ಅವರು ಹಿಂದುಳಿದ ತಾಲೂಕಾದ ಜೋಯಿಡಾದಲ್ಲಿ ತಮ್ಮ ಕಾರ್ಯದಕ್ಷತೆ ಮತ್ತು ಉತ್ತಮ ಆಡಳಿತದಿಂದ ಜೋಯಿಡಾ ತಾಲೂಕಿನಲ್ಲಿ ಕಾಲು ಸಂಕ, ಸೇತುವೆ,ರಸ್ತೆ ,ಕುಡಿಯುವ ನೀರು ಸೇರಿದಂತೆ ಇನ್ನೂ ಕಾಮಗಾರಿಗಳನ್ನು ಯಶಸ್ವಿಯಾಗಿ ಅನುಷ್ಟಾನ ಪಡಿಸುವ ಮೂಲಕ ಗಮನ ಸೆಳೆದಿದ್ದರು. ಅವರ ಕರ್ತವ್ಯ ಬದ್ಧತೆ ಪ್ರಾಮಾಣಿಕತೆಯನ್ನು ಗಮನಿಸಿ ಸರ್.ಎಂ. ವಿಶ್ವೇಶ್ವರಯ್ಯ ಸದ್ಬಾವನಾ ಪ್ರಶಸ್ತಿಯನ್ನು ನೀಡಲಾಗಿದೆ.

ಪ್ರಶಸ್ತಿಗೆ ಭಾಜನರಾದ ಇಝಾನ್ ಮಹಮ್ಮದ್ ಅವರನ್ನು ಜೋಯಿಡಾ ತಾಲೂಕಿನ ಗಣ್ಯರನೇಕರು ಅಭಿನಂದಿಸಿದ್ದಾರೆ.