ಜುಲೈ 31 ರಿಂದ ಆಗಸ್ಟ್ 14ರ ವರೆಗೆ ಲಕ್ಷ ವೃಕ್ಷ ಅಭಿಯಾನ.

ಸಿದ್ದಾಪುರ : ಪರಿಸರ ಜಾಗೃತಿಗಾಗಿ ಜುಲೈ 31 ರಂದು ಲಕ್ಷ ವೃಕ್ಷ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತದೆ ಎಂದು ಅರಣ್ಯ ಅತಿಕ್ರಮಣ ಹೋರಾಟಗಾರ ವೇದಿಕೆಯವರು ಮಾಹಿತಿ ನೀಡಿದರು
ತಾಲೂಕಿನ 23 ಗ್ರಾಮ ಪಂಚಾಯತ್ ಹಾಗೂ ಒಂದು ಪಟ್ಟಣ ಪಂಚಾಯಿತಿ ಸೇರಿದಂತೆ ಎಲ್ಲಾ ಕಡೆಗಳಲ್ಲೂ ಜುಲೈ 31 ರಿಂದ ಆಗಸ್ಟ್ 14ರ ವರೆಗೆ ಈ ಕಾರ್ಯಕ್ರಮ ನಡೆಯಲಿದೆ ಎಂದರು
ತಾಲೂಕಿನ ಎಲ್ಲಾ ಅರಣ್ಯ ಅತಿಕ್ರಮಣ ದಾರರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಮನವಿ ಮಾಡಿದರು
ಈ ಸಂದರ್ಭದಲ್ಲಿ ವೇದಿಕೆಯ ಪ್ರಮುಖರಾದ ಮಹಾಬಲೇಶ್ವರ ಬೇಡ್ಕಣಿ, ಸುನಿಲ್ ಸಂಪಖಂಡ, ದಿನೇಶ್ ಬೇಡ್ಕಣಿ ಸರಸ್ವತಿ, ರವಿ, ಭಾಸ್ಕರ್, ಗಜಾನನ ಹಾಗೂ ಮತ್ತಿತರರು ಉಪಸ್ಥಿತರಿದ್ದರು