ತಾಲೂಕಿನಲ್ಲಿ ಸುರಿದ ಭಾರಿ ಗಾಳಿ ಮಳೆಯಿಂದ ವಾಸದ ಮನೆಗಳಿಗೆ ಹಾನಿ

ಸಿದ್ದಾಪುರ : ತಾಲೂಕಿನಲ್ಲಿ ಸುರಿದ ಭಾರಿ ಗಾಳಿ ಮಳೆಯಿಂದ ವಾಸದ ಮನೆಗಳಿಗೆ ಹಾನಿ ಸಂಭವಹಿಸಿದೆ ಗ್ರಾಮೀಣ ಭಾಗಗಳಲ್ಲಿ ಸುರಿಯುವ ಮಳೆ ತಲೆ ನೋವಾಗುವುದರ ಜೊತೆಗೆ ಆತಂಕ ತಂದೊಡ್ಡಿದೆ
ಅಳವಳ್ಳಿ ಗ್ರಾಮದ ಕಾನಳ್ಳಿಯಲ್ಲಿ ಮನೆಯ ಅಡುಗೆ ಕೋಣೆಯ ಗೋಡೆ ಕುಸಿದು ನಷ್ಟವಾಗಿದೆ ಗಣಪತಿ ನಾಯ್ಕ್ ಕಾನಳ್ಳಿ ಎನ್ನುವವರಿಗೆ ಸೇರಿದ ಮನೆಯಾಗಿದ್ದು ಸುಮಾರು 20 ಸಾವಿರ ರೂ ಹಾನಿ ಆಗಿದೆ ಎಂದು ಗ್ರಾ ಲೆಕ್ಕಾಧಿಕಾರಿ ಮನೋಜ್ ಮಾಹಿತಿ ನೀಡಿದ್ದಾರೆ