ಸುರೇಂದ್ರ ದಫೇದಾರ ಕಾಂಗ್ರೆಸ್ ಶಿಕ್ಷಕ ಘಟಕದ ಅಧ್ಯಕ್ಷ

ಸಿದ್ದಾಪುರ: ಪಟ್ಟಣದ ಹೊಸೂರಿನ ಸುರೇಂದ್ರ ದಫೇದಾರರವರನ್ನು ಕಾಂಗ್ರೆಸ್ ಶಿಕ್ಷಕ ಘಟಕದ ತಾಲೂಕ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಕೆಪಿಸಿಸಿ ಜಿಲ್ಲಾಧ್ಯಕ್ಷ ಸಾಯಿ ಗಾಂವಕರ್ ಅವರ ಅನುಮೋದನೆಯ ಮೇರೆಗೆ ಜಿಲ್ಲಾಧ್ಯಕ್ಷ ನಾರಾಯಣ ನಾಯಕ್ ಸೂರ್ವೆರವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ತಕ್ಷಣವೇ ತಮಗೆ ನೀಡಿರುವ ಜವಾಬ್ದಾರಿಯನ್ನು ವಹಿಸಿಕೊಂಡು ಜಿಲ್ಲಾ ಹಾಗೂ ತಾಲೂಕ ಸಮಿತಿಯ ಮಾರ್ಗದರ್ಶನ ಹಾಗೂ ಸ್ಥಳೀಯ ನಾಯಕರ ಸಹಯೋಗದಲ್ಲಿ ಶಿಕ್ಷಕರ ಘಟಕದ ಪಕ್ಷ ಸಂಘಟನೆ ಹಾಗೂ ಬಲವರ್ಧನೆಗೆ ಶ್ರಮಿಸಬೇಕೆಂದು ಸೂಚಿಸಲಾಗಿದೆ.
ಇವರು 36 ವರ್ಷ ಕಾಲೇಜು ಪ್ರಾಧ್ಯಾಪಕರಾಗಿ, (7 ವರ್ಷ ಪ್ರಾಚಾರ್ಯರಾಗಿ) ಕೆಲಸ ಮಾಡಿದ ಅನುಭವ ಹೊಂದಿರುತ್ತಾರೆ. ಅಲ್ಲದೇ
ಕರ್ನಾಟಕ ವಿಶ್ವವಿದ್ಯಾಲಯ ಕಾಲೇಜು ಶಿಕ್ಷಕರ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸಂಘಟನೆಯಲ್ಲೂ ಅನುಭವ ಪಡೆದಿರುತ್ತಾರೆ.