ಕಲ್ಯಾಣಪುರ ಸುತ್ತಮುತ್ತಲಿನ ಭಾಗದಲ್ಲಿನ ಗದ್ದೆಗಳು ನೀರಿನಲ್ಲಿ ಮುಳುಗಿ ಸಂಪೂರ್ಣ ಜಲಾವೃತ

ಸಿದ್ದಾಪುರ : ಕಲ್ಯಾಣಪುರ ಸುತ್ತಮುತ್ತಲಿನ ಭಾಗದಲ್ಲಿನ ಗದ್ದೆಗಳು ನೀರಿನಲ್ಲಿ ಮುಳುಗಿ ಸಂಪೂರ್ಣ ಜಲಾವೃತಗೊಂಡಿವೆ ಇದರಿಂದ ರೈತ ವಲಯದಲ್ಲಿ ಆತಂಕ ಎದುರಾಗಿದೆ
ಕಳೆದ ಕೆಲ ವರ್ಷ ಈ ಪ್ರದೇಶದಲ್ಲಿ ನೆರೆ ಹಾನಿಯಾಗಿದ್ದು ಜನತೆ ಹಲವಾರು ರೀತಿಯಲ್ಲಿ ಸಂಕಷ್ಟ ಎದುರಿಸಿದ್ದರು
ಸುರಕ್ಷತೆ ದೃಷ್ಟಿಯಿಂದ ಕಾಳಜಿ ಕೇಂದ್ರ ತೆರೆದು ತೊಂದರೆ ಉಂಟಾದವರಿಗೆ ಆಶ್ರಯನೀಡಲಾಗಿತ್ತು
ಈಗ ಅದೇ ರೀತಿಯ ವಾತಾವರಣ ಕಂಡು ಬರುತ್ತಿದ್ದು ಮತ್ತೆ ಎಲ್ಲಿ ಪ್ರವಾಹವಾಗುತ್ತದೆ ಮನೆಗಳಿಗೆ ಹಾನಿಯಾಗುತ್ತದೋ ಎನ್ನುವ ಭೀತಿ ಜನತೆಯಲ್ಲಿ ಮನೆ ಮಾಡಿದೆ
ಹೊಳೆ ತುಂಬಿ ಹೊಳೆಯ ನೀರು ಹೊಲ ಗದ್ದೆ ಆವರಿಸಿ ರಸ್ತೆ ಮುಳುಗಿ ಆ ರಸ್ತೆಯಲ್ಲಿ ಸಂಪರ್ಕ ಕಡಿತಗೊಂಡಿದೆ
ಮಂಗಳವಾರವು ಸಹ ಮಳೆ ಮುಂದುವರೆದಿದ್ದು ಮಳೆ ಜನರ ನಿದ್ದೆಗೆಡಿಸಿದೆ