ಬಾಡಗುಂದದಲ್ಲಿ ಕೊಚ್ಚಿಹೋದ ಸೇತುವೆ : ಸಂಪರ್ಕ ಕಡಿತ

ಜೋಯಿಡಾ : ತಾಲ್ಲೂಕಿನ ಅವೇಡಾ ಗ್ರಾಮ ಪಂಚಾಯ್ತು ವ್ಯಾಪ್ತಿಯಲ್ಲಿ ಬರುವ ಬಾಡಗುಂದದ ಸೇತುವೆ ಕೊಚ್ಚಿ ಹೋಗಿದ್ದು, ಸಂಪರ್ಕ ಕಡಿತಗೊಂಡಿದೆ.

ಬಾಡಗುಂದದ ಜನತೆಯ ಆರಾಧ್ಯದೇವರಾದ ಶ್ರೀ.ಕಾಳಿಕಾ ದೇವಸ್ಥಾನಕ್ಕೆ ಇದೇ ರಸ್ತೆಯಲ್ಲಿ ಹೋಗಬೇಕಾಗಿದ್ದು, ಇದೀಗ ದೇವಸ್ಥಾನಕ್ಕೂ ಹೋಗದಂತೆ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಕಳೆದ ವರ್ಷವೆ ಸ್ಥಳೀಯ ಜನತೆ ಹೊಸ ಸೇತುವೆಗೆ ಮನವಿ ಮಾಡಿದ್ದರು. ಆದರೇ ಜನಪ್ರತಿನಿಧಿಗಳು ಮಾತ್ರ ಈ ಬಗ್ಗೆ ಅಷ್ಟೊಂದು ಲಕ್ಷ್ಯ ನೀಡದ ಹಿನ್ನಲೆಯಲ್ಲಿ ಇದೀಗ ಹಳೆಯದಾದ ಸೇತುವೆ ಕೊಚ್ಚಿ ಹೋಗಿದೆ. ಇನ್ನೂ ಅವೇಡಾ ಗ್ರಾಮ ಪಂಚಾಯ್ತಿಯವರು ಶಾಸಕರನ್ನು ಬಿಡದೇ ಕಾಡಿ ಸೇತುವೆಯನ್ನು ಮಂಜೂರು ಮಾಡಿಸಿಕೊಳ್ಳಬೇಕಾಗಿದೆ. ಸೇತುವೆ ನಿರ್ಮಾಣ ಮತ್ತು ರಸ್ತೆ ದುರಸ್ತಿಗಾಗಿ ಸ್ಥಳೀಯರಾದ ಉಮೇಶ್ ಸಾವಳಂಗಿಮಠ ಅವರು ಸೋಮವಾರ ಮಾಧ್ಯಮದ ಮೂಲಕ ಮನವಿ ಮಾಡಿದ್ದಾರೆ.