ವಿಪರೀತವಾಗಿ ಸುರಿಯುತ್ತಿರುವ ಮಳೆ ಜನಜೀವನ ಅಸ್ತ ವ್ಯಸ್ತ

ಸಿದ್ದಾಪುರ : ವಿಪರೀತವಾಗಿ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತ ವ್ಯಸ್ತ ವಾಗುವುದರ ಜೊತೆಗೆ ಹಾನಿಯು ಸಹ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಗ್ರಾಮೀಣ ಭಾಗಗಳಲ್ಲದೆ ಪಟ್ಟಣದಲ್ಲೂ ಸಹ ಎಡೆ ಬಿಡದೆ ಸುರಿಯುತ್ತಿದೆ ನ್ಯಾಯಾಲಯದ ಆವರಣದ ಕಂಪೌಂಡ್ ಕುಸಿದು ಬಿದ್ದು ಹಾನಿಯಾಗಿದೆ
ಶಿರಸಿ ಸಿದ್ದಾಪುರ ಮುಖ್ಯ ರಸ್ತೆಯ ಅಂಚಿನಲ್ಲಿರುವ ನ್ಯಾಯಾಲಯದ ಕಂಪೌಂಡ್ ಕುಸಿದು ಬಿದ್ದಿರುವುದರಿಂದ ನ್ಯಾಯಾಲಯಕ್ಕೆ ಬರುವ ವಾಹನ ಸವಾರರು ಆ ಜಾಗದಲ್ಲಿ ವಾಹನ ಪಾರ್ಕಿಂಗ್ ಮಾಡುತ್ತಿದ್ದರು ಇವತ್ತು ಪಾರ್ಕಿಂಗ್ ಗೆ ಸ್ವಲ್ಪ ತೊಂದರೆ ಉಂಟಾಯಿತು ಮುಖ್ಯ ರಸ್ತೆಯೂ ಆಗಿರುವುದರಿಂದ ವಾಹನ ಪಾದಚಾರಿ ಸಂಚಾರ ಕ್ಕೂ ಅಡಚಣೆ ಆಯಿತು
ಇಲ್ಲಿ ಬೇಸಿಗೆಯಿಂದ ರಸ್ತೆ ಅಗಲೀಕರಣ ಕಾಮಗಾರಿ ಪ್ರಗತಿಯಲ್ಲಿತ್ತು ಕಪೌಂಡ್ ಗೆ ಯಾವುದೇ ಭದ್ರತೆ ಇಲ್ಲದೆ ಇರುವುದು ಹಾನಿಯಾಗಲು ಕಾರಣವಾಗಿದೆ ಎಂದು ಹಲವರು ಮಾತನಾಡುತ್ತಿದ್ದರು.