ಗುರುವಾರ ರಾತ್ರಿ ಮತ್ತು ಶುಕ್ರವಾರ ಬೆಳಗಿನ ಜಾವಾ ಬಾರಿ ಗಾಳಿ ಮಳೆಯಿಂದ ಅಡಿಕೆ ತೋಟ ಮತ್ತು ವಾಸ್ತವ್ಯದ ಮನೆಗಳಿಗೆ ಹಾನಿ

ಸಿದ್ದಾಪುರ : ಗುರುವಾರ ರಾತ್ರಿ ಮತ್ತು ಶುಕ್ರವಾರ ಬೆಳಿಗಿನ ಜಾವಾ ಬಾರಿ ಗಾಳಿ ಮಳೆಯಿಂದ ಅಡಿಕೆ ತೋಟ ಮತ್ತು ವಾಸ್ತವ್ಯದ ಮನೆಗಳಿಗೆ ಹಾನಿಯಾದ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ
ಇಟಗಿ ಗ್ರಾಮದ ಹರಿಜನಕೇರಿ ಮಜರೆಯ ಮಂಗಲಾ ಕೆರಿಯಾ ಹರಿಜನ ರವರ ಕಚ್ಚಾಮನೆಯ ಮುಂಭಾಗದ ಗೋಡೆಯು ಅತಿವೃಷ್ಟಿಯಿಂದ ಕುಸಿದು ಬಿದ್ದು ಅಂದಾಜು 20 ಸಾವಿರ ರೂಪಾಯಿ ಹಾನಿಯಾಗುತ್ತದೆ
ಭಾರಿ ಗಾಳಿಗೆ ಕಾರಗೊಡ್ ನಲ್ಲಿ ಶ್ರೀಧರ ಗಣಪತಿ ಭಟ್ ಎನ್ನುವವರಿಗೆ ಸೇರಿದ ತೋಟದಲ್ಲಿ 20 ಅಡಿಕೆ ಮರಗಳು ಬಿದ್ದು ಅಂದಾಜು 15,000 ರೂಪಾಯಿ ಹಾನಿಯಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.