ಹಳಿಯಾಳದಲ್ಲಿ ಪ್ರಸಾದ್ ದೇಶಪಾಂಡೆಯವರನ್ನು ಭೇಟಿಯಾದ ದಾಂಡೇಲಿಯ ಕಾಂಗ್ರೆಸ್ ಮುಖಂಡರ ನಿಯೋಗ

ಹಳಿಯಾಳ : ಕಾಂಗ್ರೆಸ್ ಮುಖಂಡರಾದ ಪ್ರಸಾದ್ ದೇಶಪಾಂಡೆಯವರನ್ನು ಹಳಿಯಾಳದ ಅವರ ನಿವಾಸದಲ್ಲಿ ದಾಂಡೇಲಿಯ ಕಾಂಗ್ರೆಸ್ ಮುಖಂಡರು ಭೇಟಿಯಾಗಿ ಪಕ್ಷ ಸಂಘಟನೆಯ ಬಗ್ಗೆ ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ನಿಯೋಗದ ಜೊತೆ ಮಾತನಾಡಿದ ಪ್ರಸಾದ್ ದೇಶಪಾಂಡೆಯವರು ರಾಜ್ಯ ಸರಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೇತೃತ್ವದಡಿ ಎಲ್ಲರು ಶ್ರಮಿಸಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಇಕ್ಬಾಲ್ ಶೇಖ್, ಎಸ್.ಎಸ್.ಪೂಜಾರ್, ಮೋಹನ ಹಲವಾಯಿ, ಕಾಂಗ್ರೆಸ್ ಅಲ್ಪಸಂಖ್ಯಾತರ ಜಿಲ್ಲಾ ಘಟಕದ ಕಾರ್ಯದರ್ಶಿ ದಾದಾಪೀರ್ ನದೀಮುಲ್ಲಾ, ಪಕ್ಷದ ಜಿಲ್ಲಾ ವಕ್ತಾರ ಆರ್.ಪಿ.ನಾಯ್ಕ, ನಗರ ಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಅನಿಲ್ ನಾಯ್ಕರ್, ಪಕ್ಷದ ಮುಖಂಡರುಗಳಾದ ತಸ್ವರ್ ಸೌದಾಗರ್, ರಾಮಲಿಂಗ ಜಾಧವ್, ಅನಿಲ್ ದಂಡಗಲ್, ಕೀರ್ತಿ ಗಾಂವಕರ್, ಅಡಿವೆಪ್ಪ ಭದ್ರಕಾಳಿ ಹಾಗೂ ಮಹಿಳಾ ಕಾಂಗ್ರೆಸ್ ಮುಖಂಡರು ಮೊದಲಾದವರು ಉಪಸ್ಥಿತರಿದ್ದರು.