ಅಡಿಕೆ ತೋಟದ ಮೇಲೆ ಕಾಡು ಜಾತಿಯ ಮರ ಬಿದ್ದು ರೈತರಿಗೆ ನಷ್ಟ.

ಸಿದ್ದಾಪುರ : ತಾಲೂಕಿನಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಅಡಿಕೆ ತೋಟದ ಮೇಲೆ ಕಾಡು ಜಾತಿಯ ಮರ ಬಿದ್ದು ಹಾನಿಯಾಗಿ ರೈತರಿಗೆ ಬೆಳೆ ನಷ್ಟವಾಗಿದೆ
ಗೊದ್ಲಬೀಳು ಗ್ರಾಮದ ಸ ನಂ 14/1ರಲ್ಲಿ 0-9-8 ಭಾಗಾಯ್ತು ಕ್ಷೇತ್ರದಲ್ಲಿ ಸುಧಾ ಶ್ರೀಪಾದ ಹಗಡೆ ಇವರ ಅಡಿಕೆ ತೋಟದಲ್ಲಿ ಆಡಿಕೆ ಮರಗಳ ಮೇಲೆ ಕಾಡು ಜಾತಿಯ ಹೆಬ್ಬು ಹಲಸು ಹಾಗೂ ಸಂಪಿಗೆ ಮರ ಬಿದ್ದು ಅಡಿಕೆ ಮರದ ಮುರಿದು ಬಿದ್ದಿವೆ ಪರಿಣಾಮ ಅಡಿಕೆ ಬೆಳೆ ಹಾನಿಯಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.