ಗಮನ ಸೆಳೆದ ಪೋಷಕಾಂಶ ಕುರಿತ ಕಿರು ನಾಟಕ


ಸಿದ್ದಾಪುರ : ತಾಲೂಕಿನ ಸ ಹಿ ಪ್ರಾ ಶಾಲೆ ಕಲ್ಲುರಿನಲ್ಲಿ ಇಲಾಖೆಯ ನಿರ್ದೇಶನದಂತೆ ಸಂಭ್ರಮ ಶನಿವಾರ ಕುರಿತಂತೆ ಆರೋಗ್ಯಕರ ಜೀವನ ಶೈಲಿ. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಪೋಷಕಾಂಶ ಕುರಿತ ಕಿರು ನಾಟಕ, ಯೋಗಾಸನ, ಅಹಾರ ಸಂಗ್ರಹಣ, ಅಕ್ಷಯ ಪಾತ್ರೆ ಚಿತ್ರಪಟ ತಯಾರಿಕೆ, ಮುಕಾಭಿನಯ ಮುಂತಾದ ಕಾರ್ಯಕ್ರಮವನ್ನು ಮಾಡಿಸಲಾಯಿತು ಪುಟಾಣಿ ವಿದ್ಯಾರ್ಥಿಗಳು ವಿವಿಧ ಪಾತ್ರದಲ್ಲಿ ಅಭಿನಯಿಸಿ ಗಮನ ಸೆಳೆದರು
ಕಾರ್ಯಕ್ರಮ ದಲ್ಲಿ ವಿಜ್ಞಾನದ ಹಲವಾರು ಕಲಿಕೆಯನ್ನು ಕಲಿಯಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಸಿಬ್ಬಂದಿಗಳು ಭಾಗವಹಿಸಿದ್ದರು ಎಂದು ಶಾಲಾ ಮುಖ್ಯ ಅಧ್ಯಾಪಕರದ ಶ್ರೀಕಾಂತ ಬಿ ನಾಯ್ಕ ತಿಳಿಸಿದ್ದಾರೆ.