ಗಟಾರದ ತ್ಯಾಜ್ಯ ಹೊರತೆಗೆದು 5 ದಿನವಾದರೂ ವಿಲೇವಾರಿ ಮಾಡದ ನಗರ ಸಭೆ

ದಾಂಡೇಲಿ : ನಗರದ ಅಂಬೇವಾಡಿಯ ನಾಗದೇವತಾ ದೇವಸ್ಥಾನದ ಹತ್ತಿರದಲ್ಲಿರುವ ರಸ್ತೆ ಬದಿಯ ಗಟಾರದ ತ್ಯಾಜ್ಯವನ್ನು ಹೊರತೆಗೆದು ರಸ್ತೆ ಬದಿಯಲ್ಲಿ ರಾಶಿ ಹಾಕಿ ದಿನ ಐದು ಕಳೆದರೂ ಈವರೇಗೆ ನಗರ ಸಭೆ ವಿಲೇವಾರಿ ಮಾಡದಿರುವುದರಿಂದ ಸ್ಥಳೀಯವಾಗಿ ಗಬ್ಬು ನಾರುವ ಸ್ಥಿತಿ ನಿರ್ಮಾಣವಾಗಿದೆ.
ಈ ಕೂಡಲೆ ರಾಶಿ ಹಾಕಿಟ್ಟ ತ್ಯಾಜ್ಯವನ್ನು ವಿಲೇವಾರಿ ಮಾಡಬೇಕೆಂದು ಸ್ಥಳೀಯ ಜನತೆ ನಗರ ಸಭೆಗೆ ಶನಿವಾರ ಮನವಿ ಮಾಡಿದ್ದಾರೆ.