ದಾಂಡೇಲಿ : ದೇಶಕ್ಕಾಗಿ ಚಿನ್ನದ ಪದಕಗಳನ್ನು ಗೆದ್ದುಕೊಟ್ಟಂತಹ ಮಹಿಳಾ ಕ್ರೀಡಾಪಟುಗಳ ಮೇಲೆ ನಡೆದ ದಬ್ಬಾಳಿಕೆಯನ್ನು ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದವರ ಮೇಲೆ ನಡೆದ ಪೊಲೀಸ್ ದಬ್ಬಾಳಿಕೆಯನ್ನು ಖಂಡಿಸಿ ಮೈಸೂರಿನ ಬನ್ನಿ ಮಂಟಪದ ಹತ್ತಿರ ಸಿಐಟಿಯು ನೇತೃತ್ವದಡಿ ಇಂದು ಸೋಮವಾರ ಆಯೋಜಿಸಲಾದ ಪ್ರತಿಭಟನೆಯಲ್ಲಿ ದಾಂಡೇಲಿಯ ಸಿಐಟಿಯು ಮುಖಂಡರುಗಳಾದ ಸಲೀಂ ಸೈಯದ್, ಜಗದೀಶ ನಾಯಕ, ಭವರ್ ಸಿಂಗ್, ದಿಗ್ವಿಜಯ್ ಸಿಂಗ್, ವೀರೂಪಾಕ್ಷ ಎಲಿಗಾರ್ ಮೊದಲಾದವರು ಭಾಗವಹಿಸಿದ್ದಾರೆ.