ಹಳಿಯಾಳ :ಆರ್.ವಿ.ದೇಶಪಾಂಡೆಯವರಿಗೆ ಸೂಕ್ತ ಸ್ಥಾನ ಮಾನ ನೀಡಲು ಹಳಿಯಾಳ ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡರಿಂದ ಆಗ್ರಹ

ಹಳಿಯಾಳ : ರಾಜ್ಯದ ಹಿರಿಯ ಶಾಸಕರು, ಕೆಪಿಸಿಸಿಯ ಮಾಜಿ ಅಧ್ಯಕ್ಷರು, 8 ಮುಖ್ಯಮಂತ್ರಿಗಳ ಜೊತೆ ಕೆಲಸ ಮಾಡಿದ ಅನುಭವಿ ರಾಜಕಾರಣಿಯಾಗಿರುವ ಆರ್.ವಿ.ದೇಶಪಾಂಡೆಯವರಿಗೆ ಈ ಬಾರಿಯ ಸರಕಾರದಲ್ಲಿ ಸಚಿವ ಪದವಿ ನೀಡದಿರುವುದು ಅತೀವ ಬೇಸರವನ್ನುಂಟು ಮಾಡಿದೆ. ಮುಂದಿನ ದಿನಗಳಲ್ಲಿ ಆರ್.ವಿ.ದೇಶಪಾಂಡೆಯವರಿಗೆ ಸೂಕ್ತಮಾನ ಸಿಗಬೇಕೆಂದು ಇಂದು ಸೋಮವಾರ ಬೆಳಿಗ್ಗೆ ಹಳಿಯಾಳ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡರು ಆಗ್ರಹಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡರು ಮತ್ತು ಮಾಜಿ ಜಿಲ್ಲಾ ಪಂಚಾಯ್ತು ಸದಸ್ಯರಾದ ಕೈತನಾ ಬಾರ್ಬೋಜಾ, ಹಳಿಯಾಳ ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಅನಿಲ್ ಚೌವ್ಹಾಣ್, ಕಾಂಗ್ರೆಸ್ ಮುಖಂಡರುಗಳಾದ ಪ್ರಕಾಶ ಪಾಕ್ರಿ, ಆರ್.ಆರ್.ಗುನಗ, ವಿಠ್ಠಲ್ ಸೂರ್ಯವಂಶಿ, ಪ್ರಭಾಕರ ಗಜಾಕೋಶ, ಅಶೋಕ್ ಮೇಟಿ, ರಾಜು ಮೇತ್ರಿ, ಡಿ.ವೈ.ಡಾಂಗೆ ಮೊದಲಾದವರು ಉಪಸ್ಥಿತರಿದ್ದರು.