ಹಂಗಾಮಿ ಸ್ಪೀಕರ್ ಹುದ್ದೆಯಿಂದಿಳಿದ ಆರ್.ವಿ.ದೇಶಪಾಂಡೆ

ಹಳಿಯಾಳ : ಹಳಿಯಾಳ, ದಾಂಡೇಲಿ, ಜೋಯಿಡಾ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಆರ್.ವಿ.ದೇಶಪಾಂಡೆಯವರು ರಾಜ್ಯ ವಿಧಾನ ಸಭೆಯ ಹಂಗಾಮಿ ಸ್ಪೀಕರ್ ಆಗಿ ಈ ಬಾರಿಯ ಮೊದಲ ವಿಧಾನ ಸಭಾ ಕಲಾಪವನ್ನು ನಡೆಸಿಕೊಟ್ಟು, ಸ್ಪೀಕರ್ ಆಗಿ ಯು.ಟಿ.ಖಾದರ್ ಅವರು ಆಯ್ಕೆಯಾಗುತ್ತಿದ್ದಂತೆ ಸ್ಪೀಕರ್ ಸ್ಥಾನವನ್ನು ಅವರಿಗಾಗಿ ತೆರವುಗೊಳಿಸಿ, ಹಂಗಾಮಿ ಸಭಾಧ್ಯಕರಾಗಿ ಸೇವೆ ಸಲ್ಲಿಸಲು ಸಹಕರಿಸಿದ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಹಾಗೂ ಎಲ್ಲ ಶಾಸಕರಿಗೆ ದನ್ಯವಾದವನ್ನು ಸಲ್ಲಿಸಿದರು.