ಸಿದ್ದಾಪುರ : ಲಂಬಾಪುರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದಕೃಷಿ ತರಬೇತಿ ಕಾರ್ಯಕ್ರಮ.

ಸಿದ್ದಾಪುರ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತಾಲೂಕಿನ ಲಂಬಾಪುರದಲ್ಲಿ ಕೃಷಿ ತರಬೇತಿ ಕಾರ್ಯಕ್ರಮ ನಡೆಯಿತು
ವಾಜಗೋಡು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಮಂಗಲ ಗೌಡ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ಒಕ್ಕೂಟದ ಅಧ್ಯಕ್ಷ ಕೃಷ್ಣ ಬಿ ನಾಯ್ಕ್
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು
ಆಂತರಿಕ ಲೆಕ್ಕ ಪರಿಶೋಧಕ ಉದಯ್ ರವರು ಸ್ವ ಉದ್ಯೋಗಗಳ ಕುರಿತು ಮಾಹಿತಿ ನೀಡಿದರು
ತಾಲೂಕ ಕೃಷಿ ಇಲಾಖೆಯ ಕೃಷಿ ತಾಂತ್ರಿಕ ಸಿಬ್ಬಂದಿ ಉದಯಕುಮಾರ್ ಕೃಷಿ ಇಲಾಖೆಯಲ್ಲಿ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು
ವಲಯ ಮೇಲ್ವಿಚಾರಕ ಕ್ರಷ್ಣ ಸ್ವಾಗತಿಸಿದರು
ಕೃಷಿ ಅಧಿಕಾರಿ ಮಹಾದೇವ್ ನಿರೂಪಿಸಿದರು
ವಿ ಎಲ್ ಇ ಮಾಲತಿ ಗೌಡ ಹಾಗೂ ಸಂಘದ ಸದಸ್ಯರು ಊರ ನಾಗರಿಕರು ಉಪಸ್ಥಿತರಿದ್ದರು ಸೇವಾ ಪ್ರತಿನಿಧಿ ಭಾಸ್ಕರ್ ಗೌಡ ವಂದಿಸಿದರು