ಸಿದ್ದಾಪುರ : ಕಸಾಪದ ವತಿಯಿಂದ ಬಿ ಇ ಒ ರವರಿಗೆ ಬೀಳ್ಕೊಡುಗೆ.

ಸಿದ್ದಾಪರ : ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಬಿ ಇ ಒ ಕಚೇರಿಯಲ್ಲಿ ವರ್ಗಾವಣೆಗೊಂಡ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಬೀಳ್ಕೊಡುಗೆ ಹಾಗೂ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪರಿಷತ್ ಗೆ ಅಹ್ವಾನ ಕಾರ್ಯಕ್ರಮ ನಡೆಯಿತು
ಕಸಾಪ ಪದನಿಮಿತ್ತ ಸದಸ್ಯರು, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸದಾನಂದ ಸ್ವಾಮಿ ಯವರು ವರ್ಗಾವಣೆಯಾಗಿದ್ದರಿಂದ ಮಂಗಳವಾರ ಅವರ ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪರಿಷತ್ತಿನೊಂದಿಗೆ ಹಾಗೂ ೬ ನೆಯ ಸಾಹಿತ್ಯ ಸಮ್ಮೇಳನಕ್ಕೆ ವಿಶೇಷವಾಗಿ ಸಹಕರಿಸಿದ ಕ್ಷಣಗಳನ್ನು ಸ್ಮರಿಸಿ ಗೌರವಿಸಿ ಬೀಳ್ಕೊಡಲಾಯಿತು.
ಇದೇ ಸಂದರ್ಭದಲ್ಲಿ ನೂತನವಾಗಿ ಆಗಮಿಸಿದ ಜಿ.ಐ. ನಾಯ್ಕ ಅವರನ್ನು ಸಾಹಿತ್ಯ ಪರಿಷತ್ತಿಗೆ ಆಹ್ವಾನಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಗೋಪಾಲ ನಾಯ್ಕ ಭಾಶಿ,ಕೋಶಾಧ್ಯಕ್ಷ ಪಿ.ಬಿ. ಹೊಸೂರು, ಗೌರವ ಕಾರ್ಯದರ್ಶಿ ಅಣ್ಣಪ್ಪ ನಾಯ್ಕ, ಪ್ರಶಾಂತ ಶೇಟ್, ನಿಟಕಪೂರ್ವ ಅಧ್ಯಕ್ಷ ನಾಗರಾಜ ಮಾಳ್ಕೋಡ,ಸದಸ್ಯ ಟಿ.ಕೆ. ಎಮ್ ಅಜಾದ್. ರತ್ನಾಕರ ಪಾಲೇಕರ. ಎಪ್. ಎನ್ . ಹರನಗಿರಿ , ಬಿ.ಆರ್. ಸಿ ಸಮನ್ವಾಧಿಕಾರಿ ಚೈತಕೆ.ಎಮ್. ಅಕ್ಷರ ದಾಸೋಹ ಸ.ನಿರ್ದೇಶಕ ಭೂಮೇಶ. ವ್ಯವಸ್ಥಾಪಕ ಎಮ್.ಬಿ. ನಾಯ್ಕ. ಮುಖ್ಯ ಶಿ. ಸಂಘದ ಅಧ್ಯಕ್ಷೆ ದೀಪಾ ಪಟಗಾರ, ಪ್ರಾ.ಶಾ. ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ ಹೆಗಡೆ,ಪ್ರೌ. ಶಾ. ಶಿ ಸಂಘದ ಅಧ್ಯಕ್ಷ ಆರ್.ಆರ್. ನಾಯ್ಕ, ದೈ, ಶಿ,ಶಿ ಸಂಘದ ಅಧ್ಯಕ್ಷ ಎಮ್.ವಿ. ನಾಯ್ಕ. ಲೋಕೇಶ ನಾಯ್ಕ, ಮತ್ತಿತರರು ಹಾಜರಿದ್ದರು.