ಹಳಿಯಾಳದ ಶ್ರೀ.ಸತ್ಯಸಾಯಿ ಮಂದಿರದಲ್ಲಿ ಬಾಲವಿಕಾಸ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಣೆ

ಹಳಿಯಾಳ : ಪಟ್ಟಣದ ಶ್ರೀ.ಸತ್ಯಸಾಯಿ ಮಂದಿರದಲ್ಲಿ ಶ್ರೀ ಸತ್ಯ ಸಾಯಿ ಸೇವಾ ಸಮಿತಿಯ ಆಶ್ರಯದಡಿ ಬಾಲವಿಕಾಸ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

2022-23 ನೇ ಸಾಲಿನ ಬಾಲವಿಕಾಸ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮಕ್ಕಳಿಗೆ ಪ್ರಶಸ್ತಿ ಪತ್ರವನ್ನು ವಿತರಿಸಿ ಮಾತನಾಡಿದ ಶ್ರೀ.ಸತ್ಯಸಾಯಿ ಸೇವಾ ಸಮಿತಿಯ ಆಧ್ಯಾತ್ಮಿಕ ವಿಭಾಗದ ಜಿಲ್ಲಾ ಸಂಯೋಜಕಿ ದೀಪಾ ಪ್ರಕಾಶ ಮಾರಿಹಾಳ ಅವರು ಮಕ್ಕಳಲ್ಲಿ ಸುಸಂಸ್ಕೃತ ಆದರ್ಶ ನಡವಳಿಕೆಗಳು ಮೈಗೂಡಿಸಿಕೊಳ್ಳುವಂತಾಗಲು ಬಾಲವಿಕಾಸ ಕೇಂದ್ರ ಪರಿಣಾಮಕಾರಿಯಾಗಿದೆ. ಸಾಧನೆಗೈದ ವಿದ್ಯಾರ್ಥಿಗಳು ಮತ್ತಷ್ಟು ಸಾಧನೆ ಮಾಡಲು ಈ ಕಾರ್ಯಕ್ರಮ ಸ್ಪೂರ್ತಿಯಾಗಲೆಂದರು.

ದಾಂಡೇಲಿಯ ಬಾಲವಿಕಾಸದ ಶಿಕ್ಷಕಿ ಸುನೀತಾ ರಾಂಗಣೇಕರ ಅವರು ಸಂದರ್ಭೋಚಿತವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಹಳಿಯಾಳ ಸಮಿತಿಯ ಬಾಲವಿಕಾಸ ಕೇಂದ್ರದ ಗುರುಳಾದ ಎಂ.ಎಂ.ಸೇಠ್, ಗೀತಾ ಸೇಠ್ ಹಾಗೂ ಗುಲಾಬಿಯವರು ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಸಂಘಟಿಸಿದ್ದರು.

ಕಾರ್ಯಕ್ರಮದಲ್ಲಿ ಬಾಲವಿಕಾಸ ಕೇಂದ್ರದ ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಪಾಲಕರು ಹಾಗೂ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.