ಸಿದ್ದಾಪುರ : ಜುಲೈ ೩ರಿಂದ ಸೆ.೨೮ ರ ವರೆಗೆ ಮಾಧವಾನಂದಭಾರತೀ ಸ್ವಾಮಿಗಳ ಪ್ರಥಮಚಾತುರ್ಮಾಸ ವೃತ.

ಸಿದ್ದಾಪುರ : ತಾಲೂಕಿನ ಮನ್ನೆಲೆಮಾವಿನ ಮಠದ ಪೀಠಾಧೀಶ ಶ್ರೀ ಮಾಧವಾನಂದ ಭಾರತೀ ಸ್ವಾಮಿಗಳವರ ಪ್ರಥಮ ಚಾತುರ್ಮಾಸ ವೃತವು ಶ್ರೀಮನ್ನಲೆಮಾವಿನ ಮಠದಲ್ಲಿ ಜುಲೈ ೩ರಿಂದ ಸೆ.೨೮ ಅನಂತ ಚತುರ್ದಶಿಯವರೆಗೆ ಜರುಗಲಿದೆ.
ಜುಲೈ ೩ ಗುರುಪೂರ್ಣಿಮೆಯಂದು ವ್ಯಾಸಪೂಜೆಯೊಂದಿಗೆ ಚಾತುರ್ಮಾಸ ವೃತ ಆರಂಭವಾಗುತ್ತದೆ. ಅಂದು ಸಮಸ್ತ ಶಿಷ್ಯರ ಪರವಾಗಿ ಪಾದಪೂಜೆ ಮತ್ತು ಭಿಕ್ಷಾವಂದನೆ ನೆರವೇರಲಿದೆ. ಎಲ್ಲ ಶಿಷ್ಯರು ಹಾಗೂ ಭಕ್ತರು ಅಂದು ಶ್ರೀಮಠಕ್ಕೆ ಆಗಮಿಸಿ ಶ್ರೀಗಳ ದರ್ಶನಪಡೆದು ಪಾದಪೂಜೆ ಹಾಗೂ ಭಿಕ್ಷಾವಂದನೆ ಸೇವೆಯಲ್ಲಿ ಪಾಲ್ಗೊಳ್ಳುವಂತೆ ಮಠದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.