ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿ ಒಳ ನುಗ್ಗಿದ ಕಳ್ಳರು , ಲಕ್ಷಾಂತರ ರೂ. ಮೌಲ್ಯದ ಚಿನ್ನ, ನಗದು ಹಾಗೂ ವಿದೇಶಿ ಕರೆನ್ಸಿಗಳನ್ನು ದೋಚಿ ಪರಾರಿ

ಭಟ್ಕಳ: ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿ ಒಳ ನುಗ್ಗಿದ ಕಳ್ಳರು‌ ಲಕ್ಷಾಂತರ ರೂ ಮೌಲ್ಯದ ಚಿನ್ನ, ನಗದು ಹಾಗೂ ವಿದೇಶಿ ಕರೆನ್ಸಿಗಳನ್ನು ದೋಚಿ ಪರಾರಿಯಾದ ಘಟನೆ ತಾಲೂಕಿನ ವೆಂಕಟಾಪುರದಲ್ಲಿ ಬೆಳಕಿಗೆ ಬಂದಿದೆ.

ಪಟ್ಟಣದ ಪ್ರತಿಷ್ಟಿತ  ರಿಬ್ಕೋ  ಸಂಸ್ಥೆಯ ಮಾಲಿಕ ಎಸ್ ಎ. ರೆಹಮಾನ್ ಎನ್ನುವವರ ಮನೆಯಲ್ಲಿ ಕಳ್ಳತನವಾಗಿದೆ. ಇವರು ರಾಜ್ಯದಾದ್ಯಂತ ಹಲವು ಕಡೆಗಳಲ್ಲಿ ಸಂಸ್ಥೆಯ ಬ್ರಾಂಚ್‌ಗಳನ್ನು ಹೊಂದಿದ್ದು ತಿಂಗಳಲ್ಲಿ ೧೫ದಿನ ಹೊರಗಡೆ ಇರುತ್ತಾರೆ. ಕೆಲಸದ ನಿಮಿತ್ತ ಜೂ.೨೧ರಂದು ಬೆಂಗಳೂರಿಗೆ ತೆರಳಿದ್ದರು. ಜೂ೨೩ರಂದು ಅವರ ಕಾರು ಚಾಲಕ ಮನೆಯನ್ನು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ಮನೆಯಲ್ಲಿ ಸುಮಾರು ೭ ಲಕ್ಷದಷ್ಟು ಭಾರತೀಯ ಕರೆನ್ಸಿ, ಲಕ್ಷಾಂತರ ರೂ ಮೌಲ್ಯದ ವಿದೇಶ ಕರೆನ್ಸಿ, ೧೧೦ ಗ್ರಾಂ ಚಿನ್ನವನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಬೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ

ಗ್ರಾಮೀಣ ಠಾಣೆ ಸಿಪಿಐ ಚಂದನ ಗೋಪಾಲ, ಪಿ.ಎಸ.ಐ ಶ್ರೀಧರ ನಾಯ್ಕ ವಿದಿ ವಿಜ್ಞಾನ ಪ್ರಯೋಗಾಲದ ಸಿ ಆಪ್  ಕೈಂ ಅಧಿಕಾರಿ ವಿನಿತಾ,ಬೆರಳಚ್ಚು ತಜ್ಞರು ಮುಂತಾದವರು ಉಪಸ್ಥಿತಿ ಇದ್ದರು.

ಈ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ಮನೆಯ ಮಾಲೀಕರ ಪುತ್ರ ಮಹ್ಮದ ರೂಮೇಜ್ ಶಾಬದ್ರಿ ದೂರು ನೀಡಿದ್ದಾರೆ.