ಭಟ್ಕಳ ನಾಮಧಾರಿ ಸಮಾಜ ಪತ್ರಿಕಾ ಪ್ರಕಟಣೆ.! ಪ್ರಕಟಣೆಯಲ್ಲಿ ಏನಿದೆ ಅಂತೀರಾ ಇಲ್ಲಿದೆ ನೋಡಿ.!?

ಭಟ್ಕಳ: ಶ್ರೀ ವಾಸುಕಿ ಸರ್ಪ ದೇವಸ್ಥಾನ ಸರ್ಪನಕಟ್ಟೆ ಇವರು ದಿನಾಂಕ 18/12/2022 ರಂದು ನಡೆಸುವ ಗುರುವಂದನಾ ಕಾರ್ಯಕ್ರಮ ಆಮಂತ್ರಣ ಪತ್ರಿಕೆಯಲ್ಲಿ ನಮ್ಮ ನಾಮಧಾರಿ ಸಮಾಜದ ಹೆಸರು ಮತ್ತು ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದ ಹೆಸರು ಬಳಸಿರುವುದು ಅಕ್ಷಮ್ಯ ಅಪರಾಧ ಎಂದು ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನದ ಅಧ್ಯಕ್ಷರಾದ ಶ್ರೀ ಕ್ರಷ್ಣಾ ನಾಯ್ಕ ತಿಳಿಸಿದ್ದಾರೆ.

ಸುಮಾರು 25 ವರ್ಷದಿಂದ ಶ್ರೀರಾಮ ಕ್ಷೇತ್ರ ಮಹಾ ಸಂಸ್ಥಾನದ ಪೀಠಾಧೀಪತಿಗಳಾದಂತಹ ಶ್ರೀ ಆತ್ಮಾನಂದ ಸರಸ್ವತಿ ಸ್ವಾಮಿಜೀಯವರನ್ನು ಕುಮಟಾದ ಮಣಕಿ ಮೈದಾನದಲ್ಲಿ ಜಿಲ್ಲೆಯ ಸಮಸ್ತ ನಾಮಧಾರಿ ಸಮಾಜದವರು ಗುರುವಂಧನಾ ಕಾರ್ಯಕ್ರಮ ನಡೆಸಿ ಅಧೀಕೃತವಾಗಿ ನಮ್ಮ ಕುಲಗುರುಗಳು ಎಂದು ಸ್ವೀಕಾರ ಮಾಡಿ ಘೋಷಣೆ ಮಾಡಲಾಗಿದೆ.

ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿ ದೈವಾದೀನರಾದ ನಂತರ ಅವರ ಶಿಷ್ಯರಾದ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಶ್ರೀರಾಮ ಕ್ಷೇತ್ರ ಮಹಾ ಸಂಸ್ಥಾನದ ಪೀಠಾಧಿಪತಿಗಳಾಗಿರುತ್ತಾರೆ. ಹಾಗಾಗಿ ಶ್ರೀ ರಾಮ ಕ್ಷೇತ್ರ ಮಹಾ ಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯರೇ ನಮ್ಮ ಸಮಾಜದ ಕುಲಗುರುಗಳಾಗಿರುತ್ತಾರೆ. ಹಾಗಾಗಿ ಜಿಲ್ಲೆಯ ನಾಮಧಾರಿ ಸಮಾಜದವರಲ್ಲಿ ಯಾವುದೇ ರೀತಿಯ ಗೊಂದಲವಿರುವುದಿಲ್ಲ. ನಾಮಧಾರಿ ಸಮಾಜದ ಕುಲಗುರುಗಳು ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರೇ ಆಗಿರುತ್ತಾರೆ.

ಈ ಕುರಿತು ಸಮಾಜಿಕ ಜಾಲತಾಣದಲ್ಲಿ, ಬ್ಯಾನರುಗಳಲ್ಲಿ, ಆಮಂತ್ರಣ ಪತ್ರಿಕೆಯಲ್ಲಿ ಬರೆಯಲ್ಪಡುವ ಗೊಂದಲಮಯವಾದ ಹೇಳಿಕೆಗಳಿಗೆ ನಮ್ಮ ನಾಮಧಾರಿ ಸಮಾಜ ಬಾಂಧವರು ಕಿವಿಗೊಡಬಾರದು.

ಡಿ.18 ರಂದು ನಡೆಸುವ ಗುರುವಂದನಾ ಕಾರ್ಯಕ್ರಮಕ್ಕೆ ಸಂಬಂಧಪಟ್ಟಂತೆ ನಮ್ಮ ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟರಮಣದ ದೇವಸ್ತಾನ ಆಸರಕೇರಿಯಲ್ಲಿ ಆಡಳಿತ ಮಂಡಳಿ ಪರವಾಗಿ ಯಾವುದೇ ಕಾರ್ಯಕ್ರಮ
ಇರುವುದಿಲ್ಲ. ಈ ಕಾರ್ಯಕ್ರಮದಲ್ಲಿ ನಮ್ಮ ಗುರುಮಠ ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ತಾನ ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಭಾಗವಹಿಸುವುದಿಲ್ಲ. ಕಾರಣ ನಮ್ಮ ನಾಮಧಾರಿ ಸಮಾಜ ಭಾಂದವರು ಗೊಂದಲ ಪಡುವ ಅವಶ್ಯವಿರುವುದಿಲ್ಲ ಎಂದು ಪತ್ರಿಕಾ ಪ್ರಕಟಣೆಯ ಮೂಲಕ ನಾಮಧಾರಿ ಅಭಿವೃದ್ದಿ ಸಂಘ, ಗುರುಮಠ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಸಂದರ್ಭದಲ್ಲಿ ಗುರುಮಠದ ಉಪಾಧ್ಯಕ್ಷ ಭವಾನಿಶಂಕರ ನಾಯ್ಕ, ಗುರುಮಠದ ಕಾರ್ಯದರ್ಶಿ ಮಾಸ್ತಿ ನಾಯ್ಕ, ಶ್ರೀರಾಮ ಕ್ಷೇತ್ರದ ಸೇವಾ ಸಮಿತಿ ಅಧ್ಯಕ್ಷ ಶ್ರೀಧರ ನಾಯ್ಕ, ಮಾಜಿ ಶಾಸಕ ಜೆ.ಡಿ.ನಾಯ್ಕ, ಹಾಗೂ ಆಡಳಿತ ಮಂಡಳಿಯ ಸರ್ವ ಸದಸ್ಯರು ಹಾಜರಿದ್ದರು.