ಸಿದ್ದಾಪುರ : ಹಲಗೇರಿ,ದೊಡ್ಮನೆ ಕ್ಲಸ್ಟರ್ ನಲ್ಲಿ ನಡೆದ ನಲಿ-ಕಲಿ ಕಾರ್ಯಾಗಾರ.

ಸಿದ್ದಾಪುರ : ತಾಲೂಕಿನ ಹಲಗೇರಿ ಕ್ಲಸ್ಟರ್ ನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸುಂಕತ್ತಿಯಲ್ಲಿ
2023 24ನೇ ವರ್ಷದ ನಲಿ-ಕಲಿ ತರಗತಿಯಲ್ಲಿ ಬದಲಾಗ ಕಲಿಕಾಂಶದ ಕುರಿತು ಒಂದು ದಿನದ ಕಾರ್ಯಾಗಾರ ನಡೆಯಿತು. ಸಂಪನ್ಮೂಲ ಶಿಕ್ಷಕರಾಗಿ ಲಲಿತ ಹೆಗಡೆ ಮತ್ತು ರಶ್ಮಿ ಹೆಗಡೆಯವರು ವಿಷಯವನ್ನು ವಿವರವಾಗಿ ತಿಳಿಸಿದರು
ದೊಡ್ಮನೆ ಕ್ಲಸ್ಟರ್ ನಲ್ಲಿ ನಡೆದ ನಲಿ ಕಲಿ ಕಾರ್ಯಗಾರವನ್ನು ಕ್ಷೇತ್ರ ಸಮನ್ವಯ ಕಚೇರಿಯ ್ರೌಢ ಬಿಆರ್‌ಪಿಗಳಾದ ಮಂಜುನಾಥ ಉದ್ಘಾಟಿಸಿದರು ಭಾಸ್ಕರ್ ಮಡಿವಾಳ ಸಿಆರ್ ಪಿ ಅವರು ಬದಲಾದ ವಿಷಯಗಳ ಕುರಿತು ಶಿಕ್ಷಕರಿಗೆ ತಿಳಿಸಿದರು ಸಂಪನ್ಮೂಲ ಶಿಕ್ಷಕರಾದ ಮಂಜುನಾಥ ಸೇಡಗೇರಿ ಮತ್ತು ವೀಣಾ ನಾಯ್ಕ್ ಇವರು ವಿಷಯವನ್ನು ವಿವರಿಸಿ ಪದೋನ್ನತ ಶಿಕ್ಷಕಿ ಲಕ್ಷ್ಮಿ ನಾಯ್ಕ ಇವರು ಪ್ರಸ್ತಾವಿಕ ಮಾತನಾಡಿದರು ದೀಪ ಮತ್ತು ವಿದ್ಯಾ ಭಟ್ ಇವರು ಕಾರ್ಯಕ್ರಮ ನಡೆಸಿಕೊಟ್ಟರು ಎಲ್ಲಾ ಶಾಲೆಯ ನಲಿ ಕಲಿ ಶಿಕ್ಷಕರು ಭಾಗವಹಿಸಿದ್ದರು