ರುದ್ರ ಭೂಮಿ ಆವರಣದಲ್ಲಿ ಪರಿಸರ ದಿನಾಚರಣೆ ಮತ್ತು ಪರಿಸರ ಜಾಗೃತಿ ಕಾರ್ಯಕ್ರಮ

ಹಳಿಯಾಳ : ಪಟ್ಟಣದ ಗುತ್ತಿಗೇರಿ ಗಲ್ಲಿಯ ಹಿಂದೂ ರುದ್ರ ಭೂಮಿಯ ಆವರಣದಲ್ಲಿ ಶಾಸಕ ಆರ್ ವಿ ದೇಶಪಾಂಡೆ ನೇತೃತ್ವದಲ್ಲಿ ಪರಿಸರ ದಿನಾಚರಣೆ ಮತ್ತು ಪರಿಸರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು….
ರುದ್ರಭೂಮಿಯಲ್ಲಿ ಗಿಡನೆಟ್ಟು ಮಾತನಾಡಿದ ಶಾಸಕ ದೇಶಪಾಂಡೆ ಅವರು, ನಮ್ಮ ಬದುಕಿಗೆ ಉಸಿರಾಗಿರುವ ಗಿಡ ಮರಗಳು ಸಾಕಷ್ಟು ಮಹತ್ವ ಪಡೆದಿದ್ದು, ಮರ ಗಿಡಗಳನ್ನು ಉಳಿಸಿ ಬೆಳೆಸುವ ಕೆಲಸ ಮಾಡಿದಾಗ ಮಾತ್ರ ಜೀವ ವೈವಿಧ್ಯತೆ ರಕ್ಷಣೆ ಸಾಧ್ಯ. ನಮಗೆ ಎಲ್ಲವನ್ನೂ ನೀಡಿದ ಈ ಪರಿಸರಕ್ಕೆ ನಮ್ಮಿಂದ ಕೊಡುಗೆಗಳು ಏನು ಎನ್ನುವುದನ್ನು ಚಿಂತಿಸಿದಾಗ ಪರಿಸರ ಸಂರಕ್ಷಣೆಯ ಮಹತ್ವದ ಬಗ್ಗೆ ಅರಿವು ಮೂಡಲು ಸಾಧ್ಯವಿದೆ ಎಂದು ಹೇಳಿದ್ರು…

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು, ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಮತ್ತು ಹಿಂದೂ ರುದ್ರಭೂಮಿ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು..

ಸಂದೇಶ್‌ ಜೈನ್‌, ನುಡಿ ಸಿರಿ ನ್ಯೂಸ್‌, ಹಳಿಯಾಳ