ಉತ್ತರಕನ್ನಡ : ಭತ್ತದ ಒಣ ಹುಲ್ಲು ಹಾಗೂ ಕರಡಕ್ಕೆ ಆಕಸ್ಮಿಕ ಬೆಂಕಿ, ಅಪಾರ ಪ್ರಮಾಣದ ನಷ್ಟ.

ಸಿದ್ದಾಪುರ : ಮನೆಯ ಹಿಂಭಾಗದಲ್ಲಿ ದಾಸ್ತಾನು ಇಟ್ಟಿದ ಭತ್ತದ ಒಣ ಹುಲ್ಲು ಹಾಗೂ ಕರಡಕ್ಕೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ಪ್ರಮಾಣದ ನಷ್ಟ ಉಂಟಾದ ಘಟನೆ ತಾಲೂಕಿನ ಶಿರಳಗಿಯಲ್ಲಿ ಸೋಮವಾರ ನಡೆದಿದೆ
ಬೆಂಕಿ ಹೊತ್ತಿಕೊಂಡ ವಿಷಯ ತಿಳಿದ ಅಗ್ನಿಶಾಮಕ ದಳದವರು ಸ್ಥಳಕ್ಕೆ ಬಂದು ಸ್ಥಳೀಯರ ಸಹಕಾರದೊಂದಿಗೆ ಹೊತ್ತಿ ಉರಿತ್ತಿರುವ ಬೆಂಕಿಯನ್ನು ನಂದಿಸಿ ಆಗುವ ಹೆಚ್ಚಿನ ಅಪಾಯವನ್ನು ತಡೆದಿದ್ದಾರೆ
ಘಟನೆಯಿಂದ ರೇಣುಕಾ ತಿಮ್ಮ ನಾಯ್ಕ್ ಎನ್ನುವವರಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ
ಬತ್ತದ ಹುಲ್ಲಿಗೆ ಬೇಡಿಕೆ ಹೆಚ್ಚಿದ್ದು ರೈತರು ಹೊರ ಜಿಲ್ಲೆಗಳಿಂದ ಹೆಚ್ಚಿನ ಹಣಕ್ಕೆ ಖರೀದಿಸಿ ತರುವ ಪರಿಸ್ಥಿತಿರುವ ಈ ಸಂದರ್ಭದಲ್ಲಿ ಘಟನೆ ಸಂಭವಿಸಿದ್ದು ರೈತರಿಗೆ ಹೊರೆಯಾಗಿ ಪರಿಣಿಸಿದೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿದಿನಗಳು ಸೂಕ್ತ ಪರಿಹಾರವನ್ನು ಒದಗಿಸಬೇಕು ಎನ್ನುವಂತಹ ಒತ್ತಾಯಗಳು ರೈತ ವಲಯದಲ್ಲಿ ಕೇಳಿಬಂದಿವೆ.