ಗೋವಾ ಟ್ರಿಪ್‌ ಮುಗಿಸಿ ಬರ್ತಿದ್ದ ಕಾರು ಅಪಘಾತ: ಬೆಂಗಳೂರಿನ 2 ತಿಂಗಳ ಮಗು ಸೇರಿ ಮೂವರ ಸಾವು

ಚಿತ್ರದುರ್ಗ (ಜೂ.12): ಕುಟುಂಬದವರೆಲ್ಲ ಶನಿವಾರ ಮತ್ತು ಭಾನುವಾರ ರಜೆಯ ಹಿನ್ನೆಲೆಯಲ್ಲಿ ಫಾರ್ಚೂನರ್‌ ಕಾರಿನಲ್ಲಿ ಗೋವಾಕ್ಕೆ ಪ್ರವಾಸ ತೆರಳಿ ವಾಪಸ್‌ ಬರುತ್ತಿದ್ದ ಬೆಂಗಳೂರಿನ ಕುಟುಂಬದ ಕಾರು ಚಿತ್ರದುರ್ಗದ ಬಳಿ ಲಾರಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದು, 2 ತಿಂಗಳ ಮಗು ಸೇರಿದಂತೆ ಮೂವರು ದಾರುಣವಾಗಿ ಸಾವನ್ನಪ್ಪಿದ್ದಾರೆ.

ಎರಡು ದಿನ ಕಂಟಿನ್ಯೂ ರಜೆ ಇದಿದ್ರಿಂದ ಪ್ರವಾಸಕ್ಕೆ ತೆರಳಿದ್ದ ಕುಟುಂಬಕ್ಕೆ ಜವರಾಯ ಇನ್ನಿಲ್ಲದ ನೋವು ಕೊಟ್ಟಿದ್ದಾನೆ. ಒಂದೇ ಕುಟುಂಬದ ಮೂವರು ದುರ್ಮರಣ ಹೊಂದಿರುವ ಘಟನೆ ಚಿತ್ರದುರ್ಗ ತಾಲ್ಲೂಕಿನಲ್ಲಿ ನಡೆದಿದೆ. ಹೀಗೆ ಲಾರಿಗೆ ಡಿಕ್ಕಿ ಹೊಡೆದು ಅಪ್ಪಳಿಸಿರೋ ಬೆಂಗಳೂರು ಮೂಲದ ಕಾರು. ಅಪಘಾತದಲ್ಲಿ ರಸ್ತೆ ಮೇಲೆಯೇ ಮೃತರಾಗಿ ಬಿದ್ದಿರುವ ಜಾಕೀರ್ ಅಹ್ಮದ್, ತಬ್ಸೂಮ್ ಮತ್ತು ಗಂಭೀರ ಗಾಯಗೊಂಡಿರುವ ಸಂಬಂಧಿಕರು. ಈ ಭೀಕರ ದೃಶ್ಯಗಳು ಕಂಡು ಬಂದಿದ್ದು, ಚಿತ್ರದುರ್ಗ ತಾಲ್ಲೂಕಿನ ವಿಜಾಪುರ ಗೊಲ್ಲರಹಟ್ಟಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಬಳಿ.